Connect with us

Hi, what are you looking for?

Diksoochi News

ಕರಾವಳಿ

ಉಡುಪಿ : ಕೊರೋನಾದಿಂದ ಶ್ರೀಕೃಷ್ಣ ಲೀಲೋತ್ಸವಕ್ಕೆ ಬ್ರೇಕ್; ಸಾಂಕೇತಿಕ ಪೂಜೆ ಸಲ್ಲಿಸಿ ತಮ್ಮ ತಂಡಕ್ಕೆ ಚೈತನ್ಯ ತುಂಬಿದ ಕಿಶೋರ್ ರಾಜ್ ಕಾಡಬೆಟ್ಟು

0

ಉಡುಪಿ : ಉಡುಪಿಯ ಖ್ಯಾತ ಕಲಾವಿದ, ಶಿಕ್ಷಕರಾದ ಕಿಶೋರ್ ರಾಜ್ ಕಾಡಬೆಟ್ಟು ಅವರ ಕಲಾ ನೈಪುಣ್ಯ ದಲ್ಲಿ ರಚಿತವಾದ ಶಿವನ ಬೃಹದಾಕಾರದ ಬೊಂಬೆಯಂತೆ ಕಾಣುವ ಶಿವನ ಕಲಾಕೃತಿಯು ಉಡುಪಿಯ ಶ್ರೀಕೃಷ್ಣ ಲೀಲೋತ್ಸವದ ಪ್ರಯುಕ್ತ ಸಾಂಕೇತಿಕವಾಗಿ ಉಡುಪಿಯ ಬನ್ನಂಜೆಯ ದೇವಾಲಯಕ್ಕೆ ಭೇಟಿ ನೀಡಿ, ಪೂಜೆ ನಡೆಸಿ ಶ್ರೀದೇವರ ದರ್ಶನ ಪಡೆದರು.

ಉಡುಪಿಯ ರಥಬೀದಿಯಲ್ಲಿ ಶ್ರೀಕೃಷ್ಣ ಲೀಲೋತ್ಸವದಲ್ಲಿ ಕಲಾತಂಡಗಳಿಗೆ ಭಾಗವಹಿಸಲು ಇಲ್ಲದ ಕಾರಣ, ಸಾಂಕೇತಿಕವಾಗಿ ಆರಂಭದ ಹಂತವಾಗಿ ಬನ್ನಂಜೆ ದೇವಾಲಯದಲ್ಲಿ
ಶ್ರೀ ದೇವರದರ್ಶನ ಪೂಜೆ ಪುರಸ್ಕಾರ ನೀಡಿ, ತಮ್ಮಕಲಾತಂಡಕ್ಕೆ ಚೈತನ್ಯ ತುಂಬುವ ಕೆಲಸ ಮಾಡಲಾಗಿದೆ.

ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ಹೊರರಾಜ್ಯದ ಅನೇಕ ಕಡೆಗಳಲ್ಲಿ ಈ ಶಿವನ ಜೊತೆ, ಅಘೋರಿಗಳು ಹಾಗೂ ಜೊತೆ ಜೊತೆಯಾಗಿ ಚೆಂಡೆ ವಾದ್ಯ ಘೋಷಗಳೊಂದಿಗೆ ಕಲಾ ಪ್ರದರ್ಶನವನ್ನು ನೀಡಲಿದ್ದೇವೆ ಎಂದು ಕಿಶೋರ್ ರಾಜ್ ಕಾಡಬೆಟ್ಟು ತಿಳಿಸಿದ್ದಾರೆ.
ಈ ಹಿಂದೆ ಇವರೇ ರಚಿಸಿದ ಅಜಾನುಬಾಹು ದೈತ್ಯಾಕಾರದ ಜೈ ಹನುಮಾನ್, ಎಲ್ಲರ ಗಮನ ಸೆಳೆದಿತ್ತು ಮತ್ತು ಇತ್ತೀಚೆಗೆ ಬೆಂಗಳೂರಿನಲ್ಲಿ ಕನ್ನಡದ ಖ್ಯಾತ ನಟ
ಧ್ರುವ ಸರ್ಜಾರವರ ಪೊಗರು ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಬೆಂಗಳೂರಲ್ಲಿ ಯಶಸ್ವಿ ಪ್ರದರ್ಶನ ನೀಡಿ ಜನಜನಮನ್ನಣೆ ಗಳಿಸಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!