ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಕೇಂದ್ರ ಸರಕಾರದ ಮಹಾತ್ವಾಕಾಂಶೆಯ ಯೋಜನೆಯನ್ನು 18 ರಾಜ್ಯದಲ್ಲಿ ಕರ್ನಾಟಕ ರಾಜ್ಯ ಸರಕಾರ ಕೂಡಾ 11 ವರ್ಷದ ಹಿಂದೆ ಅನುಷ್ಠಾನಕ್ಕೆ ತಂದ ಗ್ರಾಮೀಣ ಭಾಗದವರ ಆರೋಗ್ಯದ ಆಶಾ ಕಿರಣ 108 ಉಚಿತ ಆ್ಯಂಬುಲೆನ್ಸ್ ಸೇವೆ ಕರಾವಳಿಯ 2 ಜಿಲ್ಲೆಯಲ್ಲಿ ಸಿಬ್ಬಂದಿಗಳ ಕೊರತೆಯಿಂದ ನಲುಗಿದೆ.
ಆಂಧ್ರ ಪ್ರದೇಶದ ಜಿ .ವಿ ಕೃಷ್ಣ ರೆಡ್ಡಿ ಅವರಿಂದ ಪ್ರಥಮವಾಗಿ ಆರಂಭಗೊಂಡು ಖಾಸಗಿಯಾಗಿ ಉಸ್ತುವಾರಿಯನ್ನು ರಾಜ್ಯ ಸರಕಾರಗಳು ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಪ್ರತೀ ಸರಕಾರಕ್ಕೆ ನೀಡಲಾಗಿತ್ತು. ಆರಂಭದ ಅವಧಿಯಲ್ಲಿ ರಾಜ್ಯದ 722 ಭಾಗದಲ್ಲಿ ಹೊಸದಾಗಿ ಬಂದ ಆ್ಯಂಬುಲೆನ್ಸ್ ನಲ್ಲಿ ಉಡುಪಿ ಜಿಲ್ಲೆಗೆ ಕೂಡಾ 18 ಆ್ಯಂಬುಲೆನ್ಸ್ ಬಂದಿದ್ದು, ಪ್ರತೀ ವಾಹನಕ್ಕೆ ರಾತ್ರಿ ಮತ್ತು ಹಗಲು ಪಾಳಿಗೆ 6 ಸಿಬ್ಬಂದಿಗಳು, ರಾಜ್ಯದಲ್ಲಿ 3500 ಮಂದಿ ದಿನದ 24 ಗಂಟೆ ಸೇವೆಯಲ್ಲಿದ್ದರು.
ಬರುಬರುತ್ತಾ ಕೆಲವು ಭಾಗದಲ್ಲಿ ವಾಹನಗಳು ದುರಸ್ತಿಗೆ ಬಂದು ಜನರ ಸೇವೆಗೆ ತೊಂದರೆಯಾದಾಗ ಸಾರ್ವಜನಿಕರ ಒತ್ತಾಯ ಬೇಡಿಕೆಗೆ ಮಣಿದು ಹೊಸ ವಾಹನ ಬಂದಿತ್ತು. ಪ್ರತೀ ವಾಹನಕ್ಕೆ ಚಾಲಕ( ಪೈಲೇಟ್) ಮತ್ತು ಇಬ್ಬರು ಇ. ಎಂ.ಟಿ (ಎಮರ್ಜೆನ್ಸಿ ಮ್ಯಾನೇಜ್ಮೆಂಟ್ ಟೆಕ್ನೊಜೊಜಿಸ್ಟ್ ) ಇದ್ದು, ಗ್ರಾಮೀಣ ಭಾಗದಲ್ಲಿ ವಿಷಜಂತು ಕಡಿತ, ಆಕಸ್ಮಿಕ ಅಫಘಾತ, ಗರ್ಭಿಣಿಯರಿಗೆ 108 ವಾಹನ ಸಂಜೀವಿನಿಯಾಗಿ ಹಲವಾರು ಮಂದಿ ಪ್ರಾಣ ಉಳಿಯುವಂತೆ ಆಗಿದೆ. ಇದರಲ್ಲಿ ಸೇರ್ಪಡೆಗೊಂಡವರು ಬಹುತೇಕ ಹೊರ ಜಿಲ್ಲೆಯವರಾಗಿದ್ದು, ಬಿಎಸ್ ಸಿ ನರ್ಸಿಂಗ್ ಶಿಕ್ಷಣ ಪಡೆದವರಾಗಿದ್ದು, ಸರಕಾರ ನೀಡುವ ಆರಂಭಿಕವಾಗಿ ನೀಡುವ ಗೌರವಧನ 12000ಕ್ಕೆ ದುಡಿದು ಭವಿಷ್ಯದಲ್ಲಿ ಯಾವೂದೇ ಭದ್ರತೆ ಇಲ್ಲದ ಕಾರಣ ಹೆಚ್ಚು ಸಂಬಳ ದೊರೆಯುವ ಬೇರೆ ಕೆಲಸ ಸಿಕ್ಕಾಗ ಬಿಟ್ಟು ಹೋಗುವ ವಿದ್ಯುಮಾನ ಹೆಚ್ಚಿದೆ.
ವೇತನ ಮತ್ತು ಭದ್ರತೆ ಇಲ್ಲ:

4 ವರ್ಷಕ್ಕೆ ಇಂಕ್ರಿಮೆಂಟ್ ಇದ್ದರೂ ಅದು ದಾಖಲೆಯಲ್ಲಿ ಮಾತ್ರ. ಖಾತೆಗೆ ಬರುವುದು ಕೆಲವೇ ಮೊತ್ತ ಮಾತ್ರ. ವರ್ಗಾವಣೆ ಕೂಡಾ ಇಲ್ಲದೆ ಆರಂಭದ ದಿನದಿಂದ ಒಂದೇ ಕಡೆಯಲ್ಲಿ ದುಡಿಯುವ ಮಂದಿ ಕೂಡಾ ಇದ್ದಾರೆ. ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಹರಿಯಾಣದಲ್ಲಿ 108 ಸಿಬ್ಬಂದಿಗಳನ್ನು ಸರಕಾರ ಖಾಯಂಗೊಳಿಸಿ ತಿಂಗಳೊಂದರ 30,000 ನೀಡುತ್ತಿದೆ. ಉಡುಪಿ ಮತ್ತು ದಕ ಜಿಲ್ಲೆಯಲ್ಲಿ ಬಹುತೇಕ ಕಡೆಯಲ್ಲಿ ವಾಹನ ಒಂದಕ್ಕೆ ಇದೀಗ ಇಬ್ಬರು ಸಿಬ್ಬಂದಿಗಳು ಮಾತ್ರ ಇದ್ದು, ಅವರೇ ರಾತ್ರಿ – ಹಗಲು ಜನರ ಸೇವೆಯಲ್ಲಿದ್ದಾರೆ. ಅತೀ ಗಂಭೀರ ಸ್ಥಿತಿಯಲ್ಲಿರುವ ಒಂದೇ ವ್ಯಕ್ತಿ ಜಿಲ್ಲಾ ವ್ಯಾಪ್ತಿ ಬಿಟ್ಟು ದೂರದ ಆಸ್ಪತ್ರೆಗೆ ಹೋಗಬೇಕಾದರೆ ಕೆಲವು ಸಮಯ ಒಂದು ವಾಹನ, ಬಳಿಕ ಮತ್ತೊಂದು ವಾಹನಕ್ಕೆ, ಹೀಗೆ ಮೂರು ನಾಲ್ಕು ವಾಹನಕ್ಕೆ ರಸ್ತೆ ನಡುವೆ ಶಿಫ್ಟ್ ಮಾಡಲಾಗುತ್ತದೆ. ಇದು ಅನೇಕ ಜನರಿಗೆ ಮತ್ತು ಗಂಭೀರ ಸ್ಥಿತಿಯಲ್ಲಿರುವ ವ್ಯಕ್ತಿಯ ಜೀವದ ಮೇಲೆ ಚೆಲ್ಲಾಟವಾಡಿದಂತೆ. ಇದರ ಒಳ ಮರ್ಮ ಉಸ್ತುವಾರಿ ನೋಡಿಕೊಳ್ಳುವ ಖಾಸಗಿ ಸಂಸ್ಥೆಗೆ ಮಾತ್ರ ತಿಳಿದಿದೆ .
ಕೆಲವರಿಗೆ ಮಾತ್ರ ಸರಕಾರಿ ಕ್ವಾಟ್ರಸ್ ಇದ್ದು ಅನೇಕ ಕಡೆಯಲ್ಲಿ ಸಿಬ್ಬಂದಿಗಳು ಬಾಡಿಗೆ ಮನೆಯಲ್ಲಿ ವಾಸ ಇದ್ದು, ತಿಂಗಳೊಂದಕ್ಕೆ 3 ರಿಂದ 4 ಸಾವಿರ ಮನೆ ಬಾಡಿಗೆಗೆ ನೀಡಬೇಕು. ಗ್ರಾಮೀಣ ಭಾಗ ಮತ್ತು ನಗರ ಭಾಗದಲ್ಲಿ ಹಲವಾರು ಜೀವ ಉಳಿಸುವ ತುರ್ತು ಸೇವೆಯಲ್ಲಿರುವ 108 ವಾಹನ ಸಿಬ್ಬಂದಿಗಳಿಗೆ ಸರಿಯಾದ ವೇತನ ಮತ್ತು ಭದ್ರತೆ ನೀಡಿ ಆರೋಗ್ಯ ಇಲಾಖೆ, ಸರಕಾರ ಮತ್ತು ಜನಪ್ರತಿನಿಧಿಗಳು ಗಮನಹರಿಸಬೇಕಾಗಿದೆ.
ಈಗಾಗಲೇ ಇರುವ ಸಿಬ್ಬಂದಿಗಳು ಆಕಸ್ಮಿಕವಾಗಿ ರಜೆಯಲ್ಲಿ ಹೋಗುವಾಗ ಸರಿಹೊಂದುವ ಸಿಬ್ಬಂದಿಗಳು ಬೇಕಾಗುತ್ತದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕರಾವಳಿಯ ಉಭಯ ಜಿಲ್ಲೆಯ ಬಿಎಸ್ ಸಿ ನರ್ಸಿಂಗ್ ಮತ್ತು ಜಿಎನ್ ಎಂ ತರಬೇತಿ ಪಡೆದ ವಿದ್ಯಾರ್ಥಿಗಳು ಇಂತಹ ಸೇವಾ ಮತ್ತು ಸಮರ್ಪಣಾ ಭಾವ ಇರುವ ಆರೋಗ್ಯ ಕ್ಷೇತ್ರಕ್ಕೆ ಬಂದಲ್ಲಿ ಕೊರತೆ ನೀಗಿಸಬಹುದು.
ಮಹಾಬಲ ಉಡುಪಿ, ಜಿಲ್ಲಾ ವ್ಯವಸ್ಥಾಪಕರು ಜಿವಿಕೆ
108 ವಾಹನದಲ್ಲಿ ಕೆಲಸ ಮಾಡುವವರು ಮುಖ್ಯವಾಗಿ ಸೇವಾ ಮನೋಭಾವ ಇರಬೇಕು. ಸರಕಾರ ನೀಡುವ ಗೌರವಧನದಲ್ಲಿ ಬದುಕು ಕಟ್ಟಿಕೊಳ್ಳುವ ಮನಸ್ಥಿತಿ ಇರಬೇಕು ಹಾಗಿದ್ದಲ್ಲಿ ಮಾತ್ರ ಸಾದ್ಯ. ಸರಕಾರ 108 ಸಿಬ್ಬಂದಿಗಳನ್ನು ಸೂಕ್ತ ವೇತನ ನೀಡಿ ಖಾಯಂ ಗೊಳಿಸುವುದು ಉತ್ತಮ.
ರಾಧಾಕೃಷ್ಣ ಗಾಂವ್ಕರ್
5 ವರ್ಷ ಪೈಲೆಟ್ ಆಗಿ ಕಾರ್ಯ ನಿರ್ವಹಿಸಿ
ಇದೀಗ ಬೇರೊಂದು ಸಂಸ್ಥೆಯಲ್ಲಿ ಉದ್ಯೋಗಿ