Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ : “ದೇವರ ಮಕ್ಕಳು  ನಾವು” ವಾಟ್ಸಾಪ್ ಗ್ರೂಪಿನ 6ನೇ ವರ್ಷದ ವಾರ್ಷಿಕೋತ್ಸವ

0

ಬ್ರಹ್ಮಾವರ : “ದೇವರ ಮಕ್ಕಳು  ನಾವು” ವಾಟ್ಸಾಪ್ ಗ್ರೂಪಿನ 6ನೇ ವರ್ಷದ ವಾರ್ಷಿಕೋತ್ಸವವನ್ನು ಅಮ್ಮುಂಜೆ, ಕೊಳಲಗಿರಿ ಸಂತ ಅಂತೋನಿಯವರ ಇಗರ್ಜಿಯ ವಠಾರದಲ್ಲಿ ಆಚರಿಸಲಾಯಿತು. ಈ ವಾಟ್ಸಪ್ ಗ್ರೂಪಿನ ಎಡ್ಮಿನ್ ಮ್ಯಾಕ್ಸಿಂ ಮಸ್ಕರೇನ್ಹಸ್ ಇವರ ನೇತೃತ್ವದಲ್ಲಿ ಸುಮಾರು 8.50 ಲಕ್ಷ ರೂಪಾಯಿ ವೆಚ್ಚದಲ್ಲಿ ಮಾಡಿದ 5 ಜನಪರ ಕೆಲಸಗಳಾದ ಹೇರೂರಿನಲ್ಲಿ ಒಂದು ಹೊಸ ಮನೆ ನಿರ್ಮಾಣ, ಉಪ್ಪೂರಿನಲ್ಲಿ ೨ ಮನೆ ನವೀಕರಣ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೇರೂರು ಇಲ್ಲಿನ ಶಾಲಾ ಕಟ್ಟಡದ ಪೈಂಟಿಂಗ್ ಮತ್ತು ಹೊನ್ನಾವರದಲ್ಲಿ ಒಂದು ಮನೆಯ ನವೀಕರಣ ಮಾಡಿದ ಯೋಜನೆಗಳ ಉದ್ಘಾಟನೆಯನ್ನು ಸಮಾಜ ಸೇವಕಿ ಮಾಜಿ ತಾ.ಪಂ ಸದಸ್ಯೆ ವೆರೋನಿಕಾ ಕರ್ನೇಲಿಯೋ ಅವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮ್ಮುಂಜೆ ಸಂತ ಅಂತೋನಿ ಇಗರ್ಜಿಯ ಧರ್ಮಗುರುಗಳಾದ ಪಾ। ಡೇವಿಡ್ ಕ್ರಾಸ್ತಾ ಅವರು ವಹಿಸಿದ್ದರು.

ವೇದಿಕೆಯಲ್ಲಿ ಅತಿಥಿಗಳಾಗಿ ಕೊಳಲಗಿರಿ ಇಗರ್ಜಿಯ ಸಹಾಯಕ ಧರ್ಮಗುರುಗಳಾದ ಫಾ। ಜೇಸುದಾಸ್, ನಾಟಕಕಾರ ಅಲ್ವಿನ್ ಅಂದ್ರಾದೆ, ಹೇರೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮೀರಾ ಸದಾನಂದ, ಉಪ್ಪೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಕೃಷ್ಣರಾಜ್ ಕೋಟ್ಯಾನ್, ಪಂಚಾಯತ್ ಸದಸ್ಯ ಅಶ್ವಿನ್ ರೋಚ್, ಹೇರೂರು ಶಾಲೆಯ ಮುಖ್ಯೋಪಾಧ್ಯಾಯಿನಿ ಮಂಜುಳಾ, ದಾನಿಗಳಾದ ಜುಲಿಯಾನಾ ಮಸ್ಕರೇನ್ಹಸ್, ಪ್ರಮೋದ್ ಶೆಟ್ಟಿ, ಭೋನಿಪಾಸ್ ಡಿ’ಸೋಜಾ‌, ಗ್ರೂಪಿನ ಎಡ್ಮಿನ್ ಗಳಾದ ಬ್ರದರ್ ರೊನಾಲ್ಡ್ ನೊರೊನ್ಹಾ, ಮಾರ್ಕ್ ಡಿ’ಸೋಜಾ ಉಪಸ್ಥಿತರಿದ್ದರು. ಎಡ್ಮಿನ್ ವಲೇರಿಯನ್ ಕ್ರಾಸ್ತಾ ಸ್ವಾಗತಿಸಿ ನಿರೂಪಿಸಿದರು. ಎಡ್ಮಿನ್ ಮೀನಾ ಡಿ’ಸೋಜಾ ವಂದಿಸಿದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!