Connect with us

Hi, what are you looking for?

Diksoochi News

ಕರಾವಳಿ

ಕುಂದಾಪುರ : 24/7 ಕುಡಿಯುವ ನೀರಿನ ಗ್ರಾಹಕರ ನಿರಂತರ ಸೇವಾ ಕೇಂದ್ರ ಉದ್ಘಾಟನೆ

0

ವರದಿ : ದಿನೇಶ್ ರಾಯಪ್ಪನಮಠ

ಕುಂದಾಪುರ : 24/7 ಕುಡಿಯುವ ನೀರಿನ ಗ್ರಾಹಕರ ನಿರಂತರ ಸೇವಾ ಕೇಂದ್ರವು ಕುಂದಾಪುರ ಪುರಸಭಾ ಕಛೇರಿಯಲ್ಲಿ ಉದ್ಘಾಟನೆಗೊಂಡಿತು. ಪುರಸಭಾ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಹಾಗೂ ಕೆ.ಯು.ಐ.ಡಿ.ಎಫ್.ಸಿ. ಜಲಸಿರಿಯ ಕಾರ್ಯಕಾರಿ ವ್ಯವಸ್ಥಾಪಕರಾದ ಕ್ಯಾಪ್ಟನ್ ಆರ್.ಆರ್. ದೊಡ್ಡಿಹಾಳ್ ಉದ್ಷಾಟಿಸಿದರು.

ಈ ಸಂದರ್ಭ ಹಿರಿಯ ಸದಸ್ಯ ಮೋಹ£ದಾಸ್ ಶೆಣೈ ಮಾತನಾಡಿ, ನಿರಂತರ 24/7 ಗ್ರಾಹಕ ಸೇವಾ ಕೇಂದ್ರವು ಜನರ ಸಮಸ್ಯೆಗಳನ್ನು ತಿಳಿದು ಅದನ್ನು ನೋಂದಾಯಿಸಿ ಅವಧಿಯ ಮಿತಿಯೊಳಗೆ ಬಗೆಹರಿಸುವಂತೆ ಸಲಹೆ ನೀಡಿದರು. ಕ್ಯಾಪ್ಟನ್ ಆರ್.ಅರ್. ದೊಡ್ಡಿಹಾಳ್ ಮಾತನಾಡಿ, ಸಪ್ಟೆಂಬರ್ 2 ರಿಂದ ಗ್ರಾಹಕರ ಸೇವಾ ಕೇಂದ್ರವು ನಿರಂತರವಾಗಿ ಕೆಲಸ ಮಾಡುವುದೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪುರಸಭಾ ಕಛೇರಿಯ ಕಿರಿಯ ಅಭಿಯಂತರ ಸತ್ಯ, ಪುರಸಭಾ ಸದಸ್ಯರಾ ಶ್ವೇತ, ವನಿತಾ, ಸಂತೋಷ ಶೆಟ್ಟಿ, ಚಂದ್ರಶೇಖರ ಖಾರ್ವಿ, ವೈಯುಕ್ತಿಕ ಸಮಾಲೋಚಕರಾದ ಡಾ. ಕೆ.ಪಿ. ಜಯರಾಮ್, ಕುಂದಾಪುರ ಯೋಜನಾ ನಿರ್ವಹಣಾ ಘಟಕದ ಕಾರ್ಯಪಾಲಕ ಅಭಿಯಂತರ ಉಮಾಶಂಕರ್ ರಾವ್ ಎನ್, ಸಹಾಯಕ ಕಾರ್ಯಪಾಲಕರಾದ ಹರೀಶ್ ವಾಲ್ಮೀಕಿ, ಇ.ಜಿ.ಐ.ಎಸ್ ನ ಟೀಮ್ ಲೀಡರ್ ಹಾಗೂ ಸಿಬ್ಬಂದಿಗಳು, ಲಕ್ಷ್ಮೀ ಸಿವಿಲ್ ಇಂಜಿನಿಯರಿಂಗ್ ನ ಸಹಾಯಕ ಮುಖ್ಯ ವ್ಯವಸ್ಥಾಪಕ ರಂಜಿತ್, ಯೋಜನಾ ವ್ಯವಸ್ಥಾಪಕ ಗುರುಪಾದಪ್ಪ ಮೊದಲಾದವರು ಉಪಸ್ಥಿತರಿದ್ದರು.

ಆರ್.ಪಿ.ಎಮ್ ಮಂಗಳೂರು ಇದರ ಉಪಯೋಜನಾ ನಿರ್ದೇಶಕ ಮಂಜುನಾಥಯ್ಯ ಸ್ವಾಗತಿಸಿದರು, ಮಂಜುನಾಥಯ್ಯ ವಂದಿಸಿದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!