Connect with us

Hi, what are you looking for?

Diksoochi News

ಕರಾವಳಿ

ಕೋಟ – ರೋಟರಿ ಜಿಲ್ಲೆ 3182 ಮತ್ತು ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ವತಿಯಿಂದ ವಿದ್ಯಾ ಸೇತು ಪುಸ್ತಕ ವಿತರಣೆ

0

ವರದಿ : ದಿನೇಶ್ ರಾಯಪ್ಪನಮಠ

ಕೋಟ : ಕಳೆದೆರಡು ವರ್ಷಗಳಿಂದ ವಿದ್ಯಾರ್ಥಿಗಳ ಕಲಿಕೆಗೆ ಆದ ತೊಂದರೆಗಳನ್ನು ಹೋಗಲಾಡಿಸುವ ಉದ್ದೇಶದಿಂದ 8 ಮತ್ತು 9ನೇ ತರಗತಿಯ ಅಧ್ಯಯನ ವಿಷಯಗಳನ್ನು ಒಳಗೊಂಡ ಎಸ್‍ಎಸ್‍ಎಲ್‍ಸಿಗೆಪೂರಕವಾದ ಪುಸ್ತಕವೇ ವಿದ್ಯಾ ಸೇತು ಕೋಟ ವಿವೇಕ ಬಾಲಕರ ಮತ್ತು ಬಾಲಕಿಯರ ಪ್ರೌಢಶಾಲೆಯ ಒಟ್ಟು 212 ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ ಹಸ್ತಾಂತರಿಸುವ ಕಾರ್ಯಕ್ರಮವನ್ನು ವಿದ್ಯಾಸಂಸ್ಥೆಯ ಸ್ವರ್ಣ ಭವನದಲ್ಲಿ ನಡೆಸಲಾಯಿತು.
ರೋಟರಿ ಇಂಡಿಯಾ ಲಿಟ್ರೇಸಿ ಮಿಷನ್ ಇದರ ರೋಟರಿ ಜಿಲ್ಲಾ 3182 ರ ಚೇರ್ಮನ್ ಕೆ.ಸುಬ್ರಹ್ಮಣ್ಯ ಭಾಸ್ರಿ ಪುಸ್ತಕ ವಿತರಣೆಗೆ ಚಾಲನೆ ನೀಡಿ ಮಾತನಾಡಿ, ರೋಟರಿ ಜಿಲ್ಲೆ ಹಾಗೂ ಸಾರ್ವಜನಿಕ ಸಹಕಾರದಿಂದ ರೂಪಿತವಾದ ಈ ಪುಸ್ತಕಕ್ಕೆ ರೋಟರಿ ಕ್ಲಬ್‍ಗಳು ತಲಾ ನೂರರಂತೆ ಪಾವತಿಸಿ ಉಚಿತವಾಗಿ ರಾಜ್ಯದಾದ್ಯಂತ ನೀಡುತ್ತಿರುವ ಬೃಹತ್ ಯೋಜನೆ ಇದು ವಿದ್ಯಾರ್ಥಿಗಳಿಗೆ ಸದುಪಯೋಗವಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಹಂಗಾರಕಟ್ಟೆ ಸಾಸ್ತಾನದ ಅಧ್ಯಕ್ಷೆ ಯಶೋದ.ಸಿ.ಹೊಳ್ಳ ವಹಿಸಿದ್ದರು. ಈ ಸಂದರ್ಭ ರೋಟರಿ ವಲಯ 3 ಸಹಾಯಕ ಗವರ್ನರ್ ಕೆ.ಪದ್ಮನಾಭ ಕಾಂಚನ್, ರೋಟರಿ ಉಡುಪಿ ಅಧ್ಯಕ್ಷ ಹೇಮಂತ್ ಯು. ಕಾಂತ್, ರೋಟರಿ ಕಾರ್ಯದರ್ಶಿ ವಿಜ್ಞೇಶ್ವರ ಅಡಿಗ, ವಿವೇಕ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವೆಂಕಟೇಶ ಉಡುಪ ಉಪಸ್ಥಿತರಿದ್ದರು.
ವಿವೇಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ ಜಗದೀಶ ನಾವುಡ ಸ್ವಾಗತಿಸಿದರು. ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಜಗದೀಶ ಹೊಳ್ಳ ವಂದಿಸಿದರು. ರೋಟರಿ ಹಂಗರ್ಕಟ್ಟೆ ಕ್ಲಬ್‍ನ ಸಾಕ್ಷರತಾ ಚೆರ್ಮೆನ್ ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!