ವರದಿ : ದಿನೇಶ್ ರಾಯಪ್ಪನಮಠ
ಕೋಟ: ಶ್ರೀ ಮಠ ಬಾಳೆಕುದ್ರುವಿನಲ್ಲಿ ಶ್ರಾವಣ ಶನಿವಾರ ಶನಿಪ್ರದೋಷದ ಅಂಗವಾಗಿ ಸಾಮೂಹಿಕ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ಕುಂದಾಪುರದ ರಶ್ಮಿರಾಜ್ ತಂಡ ಮತ್ತು ಸ್ಥಳೀಯ ಭಕ್ತ ಮಹಿಳಾ ಮಂಡಳ ಹಾಗೂ ಶ್ರೀ ನೀಲಕಂಠ ಭಜನಾ ಮಂಡಳಿ ಹಂಗಾರಕಟ್ಟೆ ತಂಡದವರಿಂದ ಭಜನಾ ಕಾರ್ಯಕ್ರಮವು ನಡೆಯಿತು.
ಸಾರ್ವಜನಿಕರು, ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಶ್ರೀ ದೇವರ ಅನುಗ್ರಹ ಹಾಗೂ ಶ್ರೀ ಗುರುಗಳ ಆಶೀರ್ವಾದಕ್ಕೆ ಪಾತ್ರರಾದರು. ಶ್ರೀಮಠ ಬಾಳೆಕುದ್ರು ವ್ಯವಸ್ಥಾಪನಾ ಸಮಿತಿಯ ಪರವಾಗಿ ಮಂಜುನಾಥ ಭಟ್ ಕಾರ್ಯಕ್ರಮ ನಿರ್ವಹಿಸಿದರು.
Advertisement. Scroll to continue reading.