ವರದಿ : ದಿನೇಶ್ ರಾಯಪ್ಪನಮಠ
ಕೋಟ: ಜೆಸಿಐ ಸಾಲಿಗ್ರಾಮ ವಡ್ಡರ್ಸೆ ಸಿಟಿ ಹಾಗೂ ರೋಟರಿ ಕ್ಲಬ್ ಸಾಯಿಬ್ರಕಟ್ಟೆ ವತಿಯಿಂದ ಶಿರಿಯಾರದ ಪಡುಮುಂಡು ನಿವಾಸಿ ಸುರೇಖಾರವರಿಗೆ ಸೋಲಾರ್ ದೀಪವನ್ನು ಜೇಸಿಐ ಸಾಲಿಗ್ರಾಮ ವಡ್ಡರ್ಸೆ ಸಿಟಿಯ ಅಧ್ಯಕ್ಷ ಸತೀಶ್ ವಡ್ಡರ್ಸೆ ಹಾಗೂ ರೋಟರಿ ಅಧ್ಯಕ್ಷ ಪ್ರಸಾದ್ ಭಟ್ ಹಸ್ತಾಂತರಿಸಿದರು.
ಫಲಾನುಭವಿ ಸುರೇಖಾ ಮಾತನಾಡಿ, ಮನೆಯಲ್ಲಿ ಇಬ್ಬರು ಶಾಲೆಗೆ ಹೋಗುವ ಮಕ್ಕಳಿದ್ದು ಆ ಮಕ್ಕಳ ವಿದ್ಯಾಭ್ಯಾಸ ಕ್ಕೆಇದರಿಂದ ತುಂಬಾನೆ ಅನುಕೂಲವಾಗಿದ್ದು ತಮ್ಮನ್ನು ಫಲಾನುಭವಿಯಾಗಿ ಪರಿಗಣಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. ಈ ಸಂದರ್ಭದಲ್ಲಿ ಜೆಸಿಐ ಸಾಲಿಗ್ರಾಮ ವಡ್ಡರ್ಸೆ ಸಿಟಿಯ ಸ್ಥಾಪಕಾಧ್ಯಕ್ಷ ಹಾಗೂ ವಲಯ 15ರ ವಲಯಾಧಿಕಾರಿ ಸಚ್ಚಿದಾನಂದ ಅಡಿಗ, ಖಜಾಂಜಿ ಪ್ರವೀಣ್ ಪೂಜಾರಿ ಹಾಗೂ ರೋಟರಿ ವಲಯಾಧಿಕಾರಿಗಳಾದ ವಿಜಯ ಕುಮಾರ್ ಶೆಟ್ಟಿ, ಬ್ರ್ಯಾನ್ ಡಿಸೋಜಾ, ಸದಸ್ಯರಾದ ನೀಲಕಂಠ ರಾವ್, ಗಣೇಶ್, ಕಿರಣ್ ಕುಮಾರ್, ರಾಮಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.