ಬೆಂಗಳೂರು : ಒಂದೇ ಮನೆಯಲ್ಲಿ ಐವರು ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನ ತಿಗರಪಾಳ್ಯದ ಮನೆಯಲ್ಲಿ ನಡೆದಿದೆ. ಶಾಸಕ ಪತ್ರಿಕೆಯ ಸಂಪಾದಕ ಶಂಕರ್ ಎಂಬವರ ಕುಟುಂಬ ಎಂದು ತಿಳಿದು ಬಂದಿದೆ. 5 ದಿನಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದು, ಇದೀಗ ಪ್ರಕರಣ ಬೆಳಕಿಗೆ ಬಂದಿದೆ. ಭಾರತಿ(50), ಸಿಂಚನಾ, ಸಿಂಧು ರಾಣಿ(30,), ಮಧು ಸಾಗರ್(27) ಆತ್ಮಹತ್ಯೆಗೆ ಶರಣಾದವರು. ಇನ್ನು 9 ತಿಂಗಳ ಮಗು ಹಸಿವಿನಿಂದ ಸತ್ತಿತ್ತು, 3 ವರ್ಷದ ಮಗು ನೀರು ಕುಡಿದುಕೊಂಡು ಬದುಕಿತ್ತು ಎನ್ನಲಾಗಿದೆ. ಕೌಟುಂಬಿಕ ಕಲಹದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ, ನೀಡಿದ್ದಾರೆ.
Advertisement. Scroll to continue reading.