Connect with us

Hi, what are you looking for?

Diksoochi News

ಕರಾವಳಿ

ಬಾರಕೂರು : ಸೀತಾನದಿ ಕಿಂಡಿ ಆಣೆಕಟ್ಟಿಗೆ ಸಿಲುಕಿಕೊಂಡಿರುವ ತ್ಯಾಜ್ಯ; ನೀರಿನ ಹರಿವಿಗೆ ತೊಂದರೆ

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಬಾರಕೂರು ಬಳಿಯಲ್ಲಿ ಸೀತಾ ನದಿಗೆ ಕೃಷಿಕರಿಗೆ ಮತ್ತು ಸಿಹಿ ನೀರಿನ ಬಳಕೆಗೆ ನೀಲಾವರ ಮತ್ತು ಹನೆಹಳ್ಳಿಯ ಬಳಿಯಲ್ಲಿ ಹಾಕಲಾದ ಕಿಂಡಿ ಅಣೆಕಟ್ಟಿಗೆ ಮಳೆಗಾಲದಲ್ಲಿ ಬಂದ ಪ್ರವಾಹಕ್ಕೆ ಪೂರ್ವ ಭಾಗದಿಂದ ಕೊಚ್ಚಿಕೊಂಡು ಬಂದ ಬೃಹತ್ ಮರಗಳ ದಿನ್ನೆಗಳು ಮತ್ತು ಬಿದಿರಿನ ಬಲ್ಲೆಗಳು ಕಿಂಡಿಯಲ್ಲಿ ಸಿಲುಕಿಕೊಂಡು ನೀರಿನ ಹರವಿಗೆ ತೊಂದರೆಯಾಗಿದೆ.
ಬೇಸಗೆಯಲ್ಲಿ ಇಲ್ಲಿನ ಕಿಂಡಿ ಅಣೆಕಟ್ಟಿನಲ್ಲಿ ಶೇಖರಣೆಗೊಂಡ ಸಿಹಿ ನೀರು ಈ ಭಾಗದ 10 ಕಿಮೀ ದೂರದ ವರೆಗೆ ನೀರಿನ ಅಂತರ್ಜಲ ಮಟ್ಟ ಹೆಚ್ಚಿ ಇಲ್ಲಿನ ರೈತರಿಗೆ ಮತ್ತು ಕುಡಿಯುವ ನೀರಿಗೆ ಉಪಯುಕ್ತವಾಗುತ್ತದೆ.


ಪೂರ್ವ ಭಾಗದ ಸೋಮೇಶ್ವರ ದಿಂದ ಹೆಬ್ರಿ, ಹೊಕ್ಕರ್ಣೆ ಮೂಲಕ ಹರಿದು ಬರುವ ಸೀತಾ ನದಿ ತೀರದಲ್ಲಿನ ಕೆಲವರು ಪ್ರತೀ ವರ್ಷ ಕೂಡಾ ನೆಲವನ್ನು ಸಮತಟ್ಟು ಮಾಡುವಾಗ ಮತ್ತು ಹತ್ತಿರದಲ್ಲಿರುವ ಕಸಗಳನ್ನು ತಂದು ನದಿಗೆ ಸುರಿಯುವ ಜನರಿಂದ ಇಂತಹ ಅವಾಂತರಕ್ಕೆ ಕಾರಣವಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನ ಹರಿಸಿ ಸರಿಪಡಿಸಬೇಕಾಗಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!