ವರದಿ : ಬಿ.ಎಸ್.ಆಚಾರ್ಯ
ಆಗುಂಬೆ : ಕುಂದಾದ್ರಿ ಘಟಕದ ವಿಶ್ವ ಹಿಂದೂ ಪರಿಷತ್ ಭಜರಂಗದಳದ ನೇತೃತ್ವದಲ್ಲಿ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಗೋವಿಗಾಗಿ ಮೇವು ಅಭಿಯಾನದಡಿ ಗೋವಿನ ಹಸಿವು ಉಳಿಸಿ ಕೋಟಿ ಪುಣ್ಯ ಗಳಿಸಿ ಎನ್ನುವ ವಿನೂತನ ಕಾರ್ಯಕ್ರಮ ಕುಂದಾದ್ರಿಯಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗೋವಿಗಾಗಿ ಮೇವು ಸ್ಥಾಪಕ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ, ಆಗುಂಬೆ ವಿಶ್ವ ಹಿಂದೂಪರಿಷತ್ ಭಜರಂಗದಳದ ಕಾರ್ಯಕರ್ತರು ಗಡಿಭಾಗದಲ್ಲಿ ಗೋಸಾಗಾಟ ಮಾಡುವ ಗೋಕಳ್ಳರ ಹೆಡೆಮುರಿ ಕಟ್ಟುತ್ತಿದ್ದು, ಇದೀಗ ಗೋಸೇವೆ ಮಾಡಿ ಧರ್ಮಸೇವೆಯಲ್ಲಿ ತೊಡಗಿದ್ದಾರೆ ಎಂದರು.

ಭಜರಂಗದಳ ಆಗುಂಬೆ ಹೋಬಳಿ ಸಂಚಾಲಕ ಅಶ್ವತ್, ದಿನೇಶ್ ಕುಂದಾದ್ರಿ, ಹಿರಿಯ ಕೃಷಿಕ ಟೀಕಪ್ಪ ಗೌಡ, ಪ್ರಶಾಂತ್ ಕುಂದಾದ್ರಿ, ನಿತ್ಯಾನಂದ ಕೆಂದಾಳಬೈಲ್, ಸುಮಂತ್ ಕುಂದಾದ್ರಿ, ಸಂತೋಷ್ ಶೆಟ್ಟಿ ಕುಂದಾದ್ರಿ ಹಾಗೂ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.
Advertisement. Scroll to continue reading.

In this article:Diksoochi news, diksoochi Tv, diksoochi udupi, govigagi mevu, kundadri
Click to comment

































