Connect with us

Hi, what are you looking for?

Diksoochi News

ಕರಾವಳಿ

ಕುಂದಾಪುರ : ಬುದ್ದನ ಜಡ್ಡಿಗೆ ನಮ್ಮ ನಡಿಗೆ ಮತ್ತು ಮಹಿಷಾ ದಸರಾ ಕಾರ್ಯಕ್ರಮ

0

ವರದಿ : ದಿನೇಶ್ ರಾಯಪ್ಪನಮಠ

ಕುಂದಾಪುರ : ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮ ಘರ್ಜನೆ) ಉಡುಪಿ ಜಿಲ್ಲಾ ಸಮಿತಿಯಿಂದ ಬುದ್ದನ ಜಡ್ಡಿಗೆ ನಮ್ಮ ನಡಿಗೆ ಮತ್ತು ಮಹಿಷಾ ದಸರಾ ಕಾರ್ಯಕ್ರಮ ಕರ್ಕುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬುದ್ದನ ಜಡ್ಡಿನಲ್ಲಿ ನೆರವೇರಿತು.

ಐತಿಹಾಸಿಕ ಕುರುಹುಗಳಾದ ದಮ್ಮಚಕ್ರ, ಜಿಂಕೆ, ಅಶ್ವ, ಪತ್ತೆಯಾದ ಬುದ್ದನ ಜಡ್ಡುವಿನಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ಉದಯ್ ಕುಮಾರ್ ತಲ್ಲೂರು ಪ್ರಾಸ್ತಾವಿಕ ಮಾತನಾಡಿ, ಬುದ್ದನ ಜಡ್ಡಿನ ಇತಿಹಾಸಕ್ಕೆ ಚಾಲನೆ ನೀಡಿದರು.

Advertisement. Scroll to continue reading.

ಮೊದಲಿಗೆ ಅಂಬೇಡ್ಕರ್ ಭಾವ ಚಿತ್ರಕ್ಕೆ ಬೌದ್ಧ ಉಪಾಸಕರಾದ ನಾರಾಯಣ ಮಣೂರು ಹಾಗೂ ಗೋಪಾಲ ಕೃಷ್ಣರವರು ಮಾಲಾರ್ಪಾಣ ಮಾಡಿದರು.
ಬೌದ ಧರ್ಮ ಉಪಸಾಕರಾದ ಶಂಭು ಮಾಸ್ತಾರ್ ಹಾಗೂ ಗೋಪಾಲಕೃಷ್ಣ ಕುಂದಾಪುರ ರವರು ಬುದ್ದ ವಂದನೆ ಮಾಡಿ ಪಂಚ ಶೀಲಾ ಮತ್ತು ತ್ರೀಸರಣ ಬೋದಿಸಿದರು. ಬೌದ್ಧ ಉಪಸಾಕರಾದ ನಾರಾಯಣ ಮಣೂರವರು ಬುದ್ದ ಚೆರಿತೆ ಹಾಗೂ ಅಂಬೇಡ್ಕರ್ ಜೀವನ ಚರಿತ್ರೆಯನ್ನ ವಿವರಿಸಿದರು. ವಸಂತ ವಂಡ್ಸೆ ಬುದ್ದ ಗೀತೆಯನ್ನ ಪ್ರಸ್ತುತ ಪಡಿಸಿದರು.


ಕಾರ್ಯಕ್ರಮದಲ್ಲಿ ಸಂಘಟನೆಯ ಮುಖಂಡರುಗಳಾದ ಕೆ.ಎಸ್ ವಿಜಯ್,ಮಂಜುನಾಥ ಗುಡ್ಡೆಯಂಗಡಿ, ರಾಮ ಮೈಯಾಡಿ, ರಮೇಶ್ ಶೀರೂರು ರಾಘವೇಂದ್ರ ಶೀರೂರು, ಸುರೇಶ್ ಬಾಬು, ರಾಜುಮಾಸ್ಟರ ಬೀಜಾಡಿ, ಮಾಜಿ ಗ್ರಾ.ಪಂ ಸದಸ್ಯರಾದ ಮಂಜುನಾಥ ಬುದ್ದನ ಜಡ್ಡು,ಸುಖಾನಂದ ತಲ್ಲೂರು, ಸಚಿನ್ ಎಸ್ ಕುಂದಾಪುರ, ಸತ್ಯ ನಾರಾಯಣ ಬೆಳ್ಳಲಾ, ಸಂಜೀವಾ ಕೊಡ್ಲಾಡಿ, ಅರುಣಾ ಕೊಡ್ಲಾಡಿ, ರಾಮ ಬೆಳ್ಳಾಲ, ಚಂದ್ರಿಕಾ ಬೆಳ್ಳಾಲ, ಜ್ಯೋತಿ ತಲ್ಲೂರು, ಅರುಣ್, ಉದಯ್ ತಲ್ಲೂರು ಮೊದಲಾದವರು ಉಪಸ್ಥಿತರಿದ್ದರು. ಚಂದ್ರಮ ತಲ್ಲೂರು ವಂದಿಸಿದರು.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!