Connect with us

Hi, what are you looking for?

Diksoochi News

ಕರಾವಳಿ

ಕೋಟ : ಐರೋಡಿ ಸದಾನಂದ ಹೆಬ್ಬಾರ ಸಂಸ್ಮರಣಾ ದಿನಾಚರಣೆ

0

ವರದಿ : ದಿನೇಶ ರಾಯಪ್ಪನಮಠ

ಕೋಟ: ಶಿಕ್ಷಕ ರಾಷ್ಟ್ರಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ-ಐರೋಡಿ ಸಂಸ್ಥೆಯ ಸಂಸ್ಥಾಪಕರಾದ ಶಿಕ್ಷಕ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಮುಖ್ಯೋಪಾಧ್ಯಾಯ ದಿವಂಗತ ಐರೋಡಿ ಸದಾನಂದ ಹೆಬ್ಬಾರ್ ಹದಿನೆಂಟನೆಯ ವರ್ಷದ ಸಂಸ್ಮರಣಾ ಕಾರ್ಯಕ್ರಮವು ಅ.24 ರಂದು ಸಂಜೆ ಗಂಟೆ 5-30 ಕ್ಕೆ ಸಾಲಿಗ್ರಾಮದ ಗುಂಡ್ಮಿಯಲ್ಲಿರುವ ಕಲಾಕೇಂದ್ರದ ಸದಾನಂದ ರಂಗಮಂಟಪದಲ್ಲಿ ನಡೆಯಲಿದೆ. ಕಲಾಕೇಂದ್ರದ ಗೌರವಾಧ್ಯಕ್ಷರಾದ ಆನಂದ.ಸಿ.ಕುಂದರರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಕರ್ನಾಟಕ ಸರಕಾರದ ಪೂರ್ವ ಸಚಿವರಾದ ಪ್ರಮೋದ ಮಧ್ವರಾಜ್, ಬೆಂಗಳೂರಿನ ಉದ್ಯಮಿಗಳಾದ ಡಾ| ಗೋವಿಂದ ಬಾಬು ಪೂಜಾರಿ ಉಪಸ್ಥಿತರಿರುತ್ತಾರೆ. ಪತ್ರಕರ್ತರಾದ ಬೈಕಾಡಿ ಅಂಬರೀಷ್ ಭಟ್ಟರು ಸಂಸ್ಮರಣಾ ಮಾತುಗಳನ್ನು ಆಡಲಿದ್ದಾರೆ. ದಿವಂಗತ ಹೆಬ್ಬಾರರ ನೆನಪಿನಲ್ಲಿ ನೀಡಲಾಗುವ “ಸದಾನಂದ ಪ್ರಶಸ್ತಿ”ಯನ್ನು ಈ ವರ್ಷ ಯಕ್ಷಗಾನ ವಿದ್ವಾಂಸರಾದ ಉಜಿರೆ ಅಶೋಕ ಭಟ್ಟರ ಅಭಿನಂದನೀಯ ಭಾಷಣದೊಂದಿಗೆ ಯಕ್ಷಗಾನ ಪ್ರಪಂಚದ ಧೀಮಂತ ಕಲಾವಿದ, ಪ್ರಮುಖ ವಿಮರ್ಶಕ, ಶ್ರೇಷ್ಠ ಅಧ್ಯಾಪಕ, ಸಂಶೋಧಕ, ಸಾಮಾಜಿಕ ಕಾರ್ಯಕರ್ತ, ಸಂಘಟಕರಾದ ಡಾ| ಎಮ್.ಪ್ರಭಾಕರ ಜೋಷಿಯವರಿಗೆ ಅರ್ಪಿಸಿ ಗೌರವಿಸಲಾಗುವುದು.

ಸಭಾ ಕಾರ್ಯಕ್ರಮದ ನಂತರ ಖ್ಯಾತ ಕಲಾವಿದರಿಂದ ಸುಭದ್ರಾ ಕಲ್ಯಾಣ ಯಕ್ಷಗಾನ ಪ್ರದರ್ಶನವನ್ನು ಏರ್ಪಡಿಸಲಾಗಿದೆಯೆಂದು ಯಕ್ಷಗಾನ ಕಲಾಕೇಂದ್ರ ಮತ್ತು ಹೆಬ್ಬಾರ ಕುಟುಂಬದ ವೈಕುಂಠ ಹೆಬ್ಬಾರ್ ಪ್ರಕಟಿಸಿರುತ್ತಾರೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!