Connect with us

Hi, what are you looking for?

Diksoochi News

ಕರಾವಳಿ

ದಿಕ್ಸೂಚಿ ನ್ಯೂಸ್ ವಿಶೇಷ ವರದಿ : ಬನ್ನಂಜೆ : ಮೂಡನಿಂಡಬೂರು ಕಾಲುವೆಯಲ್ಲಿ ತುಂಬಿದ ತ್ಯಾಜ್ಯ; ನಗರಸಭೆಯ ನಿರ್ಲಕ್ಷ್ಯ – ಗ್ರಾಮಸ್ಥರಿಂದ ಸ್ವಚ್ಚತಾ ಕಾರ್ಯ

0

ಬನ್ನಂಜೆ :  ಮೂಡನಿಡಂಬೂರು ಬ್ರಹ್ಮಬೈದರ್ಕಳ ಗರಡಿ ಬಳಿಯ ಕಾಲುವೆಯು ಕಸದಿಂದ ತುಂಬಿದ್ದು, ಇಂದು ಗ್ರಾಮಸ್ಥರೇ ಸೇರಿಕೊಂಡು ಸ್ವಚ್ಛಗೊಳಿಸಿದ್ದಾರೆ. ಕಲ್ಸಂಕದಿಂದ ಮೂಡನಿಡಂಬೂರು  ಬಳಿ ಹಾದು ಹೋಗುವ ಕಾಲುವೆ ಇದಾಗಿದ್ದು, ನೀರಿನಲ್ಲಿ ಕಸವೇ ಕಾಣುತ್ತಿತ್ತು.

ಜನರ ಅಸಡ್ಡೆ – ನಗರ ಸಭೆಯ ನಿರ್ಲಕ್ಷ್ಯ

ನೀರು ಕಲುಷಿತಗೊಳ್ಳುವಲ್ಲಿ ಜನರ ಪಾತ್ರ ಬಹಳಷ್ಟಿದೆ. ನೀರಿಗೆ ಪ್ಲಾಸ್ಟಿಕ್, ಟಯರ್, ಮುಂತಾದ ತ್ಯಾಜ್ಯ ದಿನನಿತ್ಯ ತಂದು ಎಸೆಯುವವರೇ ಅಧಿಕ. ಕಾಲುವೆಯ ಎದುರೇ ಮನೆಗಳಿವೆ ಎಂಬುದನ್ನೂ ತಿಳಿದು ವಿಷಪೂರಿತ ಹಾವುಗಳನ್ನು ತಂದು ನೀರಿಗೆ ಎಸೆಯುವವರೂ ಇದ್ದಾರೆ. ನಗರ ಸಭೆ ಮಂದಿ ಸ್ವಚ್ಛಗೊಳಿಸದು ಆಗದು ಎಂದು ಗ್ರಾಮಸ್ಥರು ದೂರುತ್ತಿದ್ದಾರೆ. ಈ ಬಗ್ಗೆ ನಗರ ಸಭೆ ಮಾತ್ರ ಯಾವುದೇ ಕ್ರಮ ಕೈಗೊಳ್ಳದೇ ಇರೋದು ವಿಪರ್ಯಾಸ.

ಅಸಮರ್ಪಕ ಕಾಮಗಾರಿ:
ಕಾಲುವೆಯ ನಿರ್ಮಾಣವೂ ಅಸಮರ್ಪಕವಾಗಿದೆ. ಡ್ರೈನೇಜ್ ಪೈಪ್ ಲೈನ್ ವ್ಯವಸ್ಥೆ ಅಸಮರ್ಪಕವಾಗಿ ಮಾಡಲಾಗಿದೆ‌. ಇದರಿಂದಾಗಿ ನೀರು ಸರಿಯಾಗಿ ಸಾಗುವುದಿಲ್ಲ. ಕಸವೂ ಸಿಕ್ಕಿ ಹಾಕಿಕೊಳ್ಳುತ್ತಿದೆ ಎಂಬುದು ಗ್ರಾಮಸ್ಥರ ದೂರು.

ಪ್ರತೀವರ್ಷ ಪ್ರವಾಹ :
ಇಲ್ಲಿನ ಗ್ರಾಮಸ್ಥರು ಪ್ರತೀವರ್ಷ ಮಳೆಗಾಲದಲ್ಲಿ ಚಿಂತೆಯಲ್ಲಿ ಕಳೆಯುವಂತೆ ಆಗಿದೆ. ಮಳೆಗಾಲದಲ್ಲಿ ಪ್ರವಾಹ ಬಂದು ಸಂಕಷ್ಟ ಎದುರಿಸುತ್ತಾರೆ. ಜನರಿಗೆ ಉಪಯುಕ್ತವಾಗಬೇಕಾದ ಕಾಲುವೆ ಇಲ್ಲಿನ ಜನರಿಗೆ ಸಂಕಷ್ಟ ಉಂಟು ಮಾಡುತ್ತಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!