Connect with us

Hi, what are you looking for?

Diksoochi News

ಕರಾವಳಿ

ಹೆಬ್ರಿ : ಪೋಷಕರಿಗೆ ಗ್ರಾಮ ಪಂಚಾಯತ್ ನಿಂದ ಸಿಗುವ ಸರಕಾರದ ಸವಲತ್ತು ಹಾಗೂ ಅನುದಾನಗಳ ಬಗ್ಗೆ ಮಾಹಿತಿ ಕಾರ್ಯಾಗಾರ

0

ವರದಿ : ಶ್ರೀದತ್ತ ಹೆಬ್ರಿ

ಹೆಬ್ರಿ : ಅಮೃತ ಭಾರತಿ ಮಾತೃಮಂಡಳಿಯ ವತಿಯಿಂದ ಪೋಷಕರಿಗೆ ಗ್ರಾಮ ಪಂಚಾಯತ್ ನಿಂದ ಸಿಗುವ ಸರಕಾರದ ಸವಲತ್ತು ಹಾಗೂ ಅನುದಾನಗಳ ಬಗ್ಗೆ ಮಾಹಿತಿ ಕಾರ್ಯಾಗಾರ ಇಂದು ಅಮೃತ ಭಾರತಿ ಅನ್ನಪೂರ್ಣ ಸಭಾಂಗಣದಲ್ಲಿ ನಡೆಸಲಾಯಿತು.
ಸಂಪನ್ಮೂಲ ವ್ಯಕ್ತಿ ಹೆಬ್ರಿ ಗ್ರಾಮ ಪಂಚಾಯತಿನ ಪಿ.ಡಿ.ಓ. ಸದಾಶಿವ ಸೇರ್ವೆಗಾರ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಟ್ರಸ್ಟಿನ ಕಾರ್ಯದರ್ಶಿ ಗುರುದಾಸ್ ಶೆಣೈ, ಟ್ರಸ್ಟಿನ ಸದಸ್ಯೆ ಡಾ.ಭಾರ್ಗವಿ ಆರ್.ಐತಾಳ್, ಶಾಲಾ ಮುಖ್ಯ ಶಿಕ್ಷಕ ಅರುಣ್ ಗುರೂಜಿ, ಅನಿತಾ ಮಾತಾಜಿ, ಅಪರ್ಣಾ ಮಾತಾಜಿ, ಮಾತೃಮಂಡಳಿ ಅಧ್ಯಕ್ಷೆ ವೀಣಾ ಆರ್ ಭಟ್, ಮಾತೃಮಂಡಳಿ ನಿರ್ದೇಶಕಿ ವಿಮಲಾ ಮಾತಾಜಿ ಉಪಸ್ಥಿತರಿದ್ದರು.

ಡಾ.ಭಾರ್ಗವಿ ಆರ್ ‌.ಐತಾಳ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗುರುದಾಸ್ ಶೆಣೈ ಗ್ರಾಮವಿಕಾಸದ ಬಗ್ಗೆ ಮಾಹಿತಿ ನೀಡಿದರು. ವಿದ್ಯಾಭಾರತಿ ಕಾರ್ಯದರ್ಶಿ ಶಿಕ್ಷಕ ಮಹೇಶ್ ಹೈಕಾಡಿ ಉಪಸ್ಥಿತರಿದ್ದರು. ವೀಣಾ ಆರ್ ಭಟ್ ಸ್ವಾಗತಿಸಿದರು, ಕೋಶಾಧಿಕಾರಿ ಛಾಯಾ ಸೋಮಯಾಜಿ ವಂದಿಸಿದರು.
ಸುಮಾರು 60 ಜನ ಪೋಷಕರು ಇದರ ಪ್ರಯೋಜನ ಪಡೆದುಕೊಂಡರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!