ವರದಿ : ದಿನೇಶ್ ರಾಯಪ್ಪನಮಠ
ಉಡುಪಿ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಪರಮಭಕ್ತ ವೀರೇಂದ್ರ ಸುವರ್ಣ ಕಟೀಲ್ ನಿರ್ಮಾಣದ ಶ್ರೀ ದುರ್ಗಾ ಸಾನಿಧ್ಯ ಬ್ಯಾನರ್ ಅಡಿಯಲ್ಲಿ ಮೂಡಿಬಂದ ಉಂಡಾಡಿಗುಂಡ ಕನ್ನಡ ಕಿರುಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹವಾ ಮಾಡುತ್ತಿದೆ.
ಇಂದು 4:00 ಗಂಟೆಗೆ ಸಿರಿ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳ್ಳಲಿರುವ ಈ ಕಿರುಚಿತ್ರ ಸೆನ್ಸಾರ್ ನಲ್ಲಿ ಯು ಸರ್ಟಿಫಿಕೇಟ್ ಪಡೆದುಕೊಂಡಿದೆ, ಹಾಗೂ ಸೆನ್ಸಾರ್ ಆಫೀಸರ್ ಈ ಕಿರು ಚಿತ್ರವನ್ನು ಮೆಚ್ಚಿ ನಿರ್ದೇಶಕ ಮತ್ತು ನಿರ್ಮಾಪಕರಿಗೆ ಹಾಗೂ ನಟ ಮಾಸ್ಟರ್ ಧನ್ವಿತ್ ವಿ. ಸುವರ್ಣ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬಡಕುಟುಂಬದಲ್ಲಿ ಹುಟ್ಟಿದ ವಿದ್ಯಾರ್ಥಿಯೊಬ್ಬನ ಕೊರೋನಾ ಕಾಲದ ಕರಾಳ ದಿನವನ್ನು ಈ ಕಿರುಚಿತ್ರದ ಮೂಲಕ ಉತ್ತಮವಾದ ಸಂದೇಶವನ್ನು ಸಾರುತ್ತಿದೆ. ಸ್ಯಾಂಡಲ್ವುಡ್ ಮತ್ತು ತುಳು ಚಿತ್ರರಂಗದ ನಟ ನಟಿಯರು ಕಿರುಚಿತ್ರದ ಪ್ರೀಮಿಯರ್ ಶೋ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆರ್ ಕೆ ಮಂಗಳೂರು ಕ್ಯಾಮರಾ ಕಣ್ಣಲ್ಲಿ ಸುಂದರವಾಗಿ ಮೂಡಿ ಬಂದ ಈ ಕಿರು ಚಿತ್ರವನ್ನು ರಂಜಿತ್ ನಿರ್ದೇಶನ ಮಾಡಿದ್ದು ತನ್ನ ನಟನೆಯಿಂದಲೇ ಎಲ್ಲರನ್ನೂ ಮೂಕವಿಸ್ಮಿತ ರಂತೆ ಮಾಡಿದ ಮಾಸ್ತರ್ ಧನ್ವಿತ್ ವಿಥ್ ಸುವರ್ಣರಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

































