ಬೆಂಗಳೂರು : ಇಂದು ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆ ನಡೆಯಲಿದೆ. ಇಂದು ಮಧ್ಯಾಹ್ನ 12.30ರ ಸುಮಾರಿಗೆ ಬರುವ ಸಾಧ್ಯತೆ ಇದ್ದು, ಸಂಜೆಯೇ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಅಭಿಮಾನಿಗಳು ಶಾಂತಿಯುತವಾಗಿ ವರ್ತಿಸಬೇಕು. ಹೆಚ್ಚು ಜನ ಸೇರಿದರೆ ತೊಂದರೆಯಾಗುತ್ತದೆ.ರಾಜ್ಯದ ಗೌರವ ಎತ್ತಿ ಹಿಡಿಯಬೇಕಿದೆ. ಅತ್ಯಂತ ಗೌರವದಿಂದ ಪುನೀತ್ ರನ್ನು ಕಳುಹಿಸಿಕೊಡೋಣ ಎಂದು ವಿನಂತಿ ಮಾಡಿದ್ದಾರೆ.