Connect with us

Hi, what are you looking for?

Diksoochi News

ರಾಜ್ಯ

ವಿಜಯಪುರ : ಪಾದಚಾರಿ ತಾಯಿ – ಮಗನ ಮೇಲೆ ಹರಿದ ಕಾರು; ಸ್ಥಳದಲ್ಲೇ ಸಾವು

0

ವಿಜಯಪುರ : ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದಂತ ತಾಯಿ-ಮಗನ ಮೇಲೆ ಕಾರೊಂದು ಹರಿದ ಪರಿಣಾಮ, ಅಮ್ಮ-ಮಗ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ವಿಜಯಪುರದ ರಾ.ಹೆ. 50 ರಲ್ಲಿ ನಡೆದಿದೆ.

ಗೀತಾ ಪೂಜಾರಿ (35) ಹಾಗೂ ಅವರ ಮಗ ಮಂಜು ಪೂಜಾರಿ(4) ಮೃತಪಟ್ಟವರು. ವಿಜಯಪುರ ತಾಲೂಕಿನ ತಿಡಗುಂದಿ ಬಳಿಯ ರಾಷ್ಟ್ರೀಯ ಹೆದ್ದಾರಿ 50ರ ಪಕ್ಕದಲ್ಲಿ ಇಬ್ಬರು ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಾರೊಂದು, ತಾಯಿ-ಮಗನಿಗೆ ಡಿಕ್ಕಿಯಾಗಿ, ಅವರ ಮೇಲೆ ಹರಿದಿದೆ. ಇದರಿಂದಾಗಿ ಸ್ಥಳದಲ್ಲಿಯೇ ಇಬ್ಬರು ಧಾರುಣವಾಗಿ ಸಾವನ್ನಪ್ಪಿದ್ದಾರೆ.

ಘಟನೆ ನಡೆಯುತ್ತಿದ್ದಂತೇ ಪರಾರಿಯಾಗಲು ಯತ್ನಿಸಿದಂತ ಕಾರು ಚಾಲಕನನ್ನು, ಸ್ಥಳೀಯರು ಹಿಡಿದು, ತಿಡಗುಂದಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ತಿಡಗುಂದಿ ಹೊರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!