ಛತ್ತೀಸ್ ಗಢ : ಯೋಧನೊಬ್ಬ ಸಿಆರ್ ಪಿಎಫ್ ಕ್ಯಾಂಪ್ ಮೇಲೆ ಗುಂಡಿನ ದಾಳಿ ನಡೆಸಿದ ಪರಿಣಾಮ ನಾಲ್ವರು ಯೋಧರು ಹುತಾತ್ಮರಾಗಿದ್ದು, ಮೂವರು ಯೋಧರು ಗಾಯಗೊಂಡಿರುವ ಘಟನೆ ಛತ್ತೀಸ್ ಗಢದ ಸುಕ್ಮಾ ಪ್ರದೇಶದಲ್ಲಿ ಇಂದು ನಡೆದಿದೆ.
ಧನಜಿ, ರಜೀಬ್ ಮೊಂಡಲ್ ಮತ್ತು ರಾಜ್ ಮಣಿ ಕುಮಾರ್ ಯಾದವ್ ಹುತಾತ್ಮರಾದ ಯೋಧರು.
ಧನಂಜಯ್ ಕೆ.ಆರ್.ಸಿಂಗ್, ಧರ್ಮೇಂದ್ರ ಕೆ.ಆರ್., ಧರ್ಮತ್ಮಾ ಕುಮಾರ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ರಿತೇಶ್ ರಂಜನ್ ನನ್ನು ಬಂಧಿಸಲಾಗಿದೆ.
Advertisement. Scroll to continue reading.

ಇಂದು ಮುಂಜಾನೆ ಸುಮಾರು 3.25 ರ ಸುಮಾರಿಗೆ ಪಿಎಸ್ ಮರೈಗುಡ ದ ಅಡಿಯಲ್ಲಿ ಲಿಂಗಲಪಲ್ಲಿಯ ಸಿಆರ್ ಪಿಎಫ್ ಶಿಬಿರದಲ್ಲಿ ಈ ಘಟನೆ ನಡೆದಿದೆ. ಯೋಧನು ತನ್ನ ಸಹೋದ್ಯೋಗಿಗಳ ಮೇಲೆಯೇ ಗುಂಡು ಹಾರಿಸಿದ್ದಾನೆ. ಪರಿಣಾಮ ಏಳು ಸಿಬ್ಬಂದಿ ಗಾಯಗೊಂಡಿದ್ದು, ತಕ್ಷಣವೇ ಅವರನ್ನು ಭದ್ರಾಚಲಂ ಪ್ರದೇಶ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.