ಬೆಂಗಳೂರು: ಅಗಲಿದ ಕರುನಾಡ ಕಣ್ಮಣಿ ಪುನೀತ್ ರಾಜ್ ಕುಮಾರ್ ಅವರ ನೇತ್ರದಾನ ಕರುನಾಡ ಮಂದಿಗೆ ಸ್ಪೂರ್ತಿ ತಂದಿದೆ. ಈಗಾಗಲೇ ಅಪ್ಪು ಅವರ ನೇತ್ರದಾನದಿಂದಾಗಿ ನಾಲ್ವರ ಬಾಳಲ್ಲಿ ಬೆಳಕು ಮೂಡಿದೆ. ಪುನೀತ್ ಅವರ ನೇತ್ರದಿಂದ ತೆಗೆದುಕೊಂಡಿದ್ದ ಇತರೆ ಅಗಾಂಶಗಳಿಂದ ಇನ್ನೂ 10 ಮಂದಿಗೆ ಸಹಾಯವಾಗಲಿದೆ. ಈ ನಿಟ್ಟಿನಲ್ಲಿ ವೈದ್ಯರು ಶ್ರಮಿಸುತ್ತಿದ್ದಾರೆ ಎನ್ನಲಾಗಿದೆ.
ಕಣ್ಣಿನಿಂದ ಸ್ಟೆಮ್ ಸೆಲ್ (ಕಣ್ಣಿನ ರಿಮ್ ಭಾಗದಿಂದ ) ಗಳನ್ನು ಪ್ರಯೋಗಾಲಯದಲ್ಲಿ, ಕಸಿ ಮಾಡಲು ನಾರಾಯಣ ನೇತ್ರಾಲಯ ವೈದ್ಯರು ಮುಂದಾಗಿದೆ. ಈ ಪ್ರಯೋಗ ಮಲ್ಟಿಪಲ್ ಆಗಲು ಇನ್ನೂ ಕೆಲವು ದಿನಗಳು ಬೇಕಾಗುತ್ತವೆ ಎಂದು ತಿಳಿದು ಬಂದಿದೆ.
ಪಟಾಕಿ ಸಿಡಿತದಿಂದ ದೃಷ್ಟಿ ಹಾನಿಯಾಗಿದ್ದರೆ ನಿವಾರಿಸಲು ಸ್ಟೆಮ್ ಸೆಲ್ ಚಿಕಿತ್ಸೆಯು ಉತ್ತಮವಾಗಿದೆ. ಉದಾಹರಣೆಗೆ ರೆಟಿನಲ್ ಪಿಗ್ಮೆಂಟ್ ಎಪಿಥೇಲಿಯಲ್ (RPE) ಕೋಶಗಳು. ಕಣ್ಣಿನ ಕಾಯಿಲೆಯಿಂದಾಗಿ ಹಾನಿಗೊಳಗಾದ ಅಥವಾ ಕಳೆದುಹೋದ ಜೀವಕೋಶಗಳನ್ನು ಬದಲಿಸಲು ಹೊಸ RPE ಕೋಶಗಳನ್ನು ಮತ್ತೆ ಕಣ್ಣಿನೊಳಗೆ ಚುಚ್ಚಲಾಗುತ್ತದೆ.
Advertisement. Scroll to continue reading.



































