ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಜೀವನ ಪೂರ್ತಿ ಪರಿಶುದ್ದ ಸನ್ಯಾಸತ್ವ ಸ್ವೀಕರಿಸಿ, ಅಸ್ಪರ್ಶತೆ ವಿರುದ್ದ ಕ್ರಾಂತಿಕಾರಿ ಹೆಜ್ಜೆ ಇಟ್ಟ ಮಹಾಪುರುಷ, ಅಯೋಧ್ಯೆಯಲ್ಲಿ ರಾಮಮಂದಿರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಪರಮ ಹಿಂದೂ ಸಂತ ಪರಮಪೂಜ್ಯ ಪೂಜ್ಯ ಪೇಜಾವರ ವಿಶ್ವೇಶ ತೀರ್ಥ ಶ್ರೀಪಾದರು ಹಾಗೂ ಶ್ರೀಕ್ರಷ್ಣನ ಇನ್ನೊಂದು ಅವತಾರ ಹಿಂದೂಗಳ ಅರಾಧ್ಯ ದೈವ ಬಿಳಿಗಿರಿರಂಗನ ಬಗ್ಗೆ ಹಗುರವಾಗಿ ಮಾತನಾಡಿದ ಸಂಗೀತ ನಿರ್ದೇಶಕ ಹಂಸಲೇಖ ಹೇಳಿಕೆಯನ್ನು ಗೋವಿಗಾಗಿ ಮೇವು ಸಂಘಟನೆ ಖಂಡಿಸುತ್ತದೆ. ಹಂಸಲೇಖ ಅವರ ಅವಿವೇಕಿತನದ ಹೇಳಿಕೆ ಸಮಸ್ತ ಹಿಂದೂ ಧರ್ಮಕ್ಕೆ ಮಾಡಿದ ಅಪಮಾನ ತಕ್ಷಣವೇ ಅವರು ಉಡುಪಿ ಶ್ರೀಕ್ರಷ್ಣನ ಸನ್ನಿಧಾನ ಇಲ್ಲವೇ ಬಿಳಿರಂಗನ ಬೆಟ್ಟಕ್ಕೆ ಬಂದು ಸಾರ್ವಜನಿಕ ಕ್ಷಮೆಯಾಚಿಸದಿದ್ದಲ್ಲಿ ವಿವಿಧ ಸಂಘಟನೆಗಳ ನೇತ್ರತ್ವದಲ್ಲಿ ರಾಜ್ಯವ್ಯಾಪಿ ಉಗ್ರ ಹೋರಾಟ ಮಾಡಲಾಗುವುದು ಎಂದು ಗೋವಿಗಾಗಿ ಮೇವು ಸ್ಥಾಪಕ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ ಎಚ್ಚರಿಸಿದ್ದಾರೆ
Advertisement. Scroll to continue reading.

In this article:Diksoochi news, diksoochi Tv, diksoochi udupi, hamsalekha, pejavara shree, prithviraj Shetty, Udupi

Click to comment