ಉಡುಪಿ: ಉತ್ಥಾನದ್ವಾದಶಿಯಾದ ಇಂದು ಮೊದಲ ದಿನದ ಲಕ್ಷದೀಪೋತ್ಸವ ಉಡುಪಿ ಶ್ರೀಕೃಷ್ಣ ಮಠದಲ್ಲಿ ಜರುಗಿತು.
ದೀಪೋತ್ಸವವು 19 ರ ವರೆಗೆ ನಾಲ್ಕು ದಿನಗಳ ಕಾಲ ದೀಪೋತ್ಸವ ನಡೆಯಲಿದೆ. ಸತತ 148 ದಿನಗಳ ಬಳಿಕ ಗರ್ಭಗುಡಿಯಿಂದ ಉತ್ಸವ ಮೂರ್ತಿಯನ್ನು ಸ್ವರ್ಣ ಪಲ್ಲಕ್ಕಿಯಲ್ಲಿಟ್ಟು ಮಧ್ವ ಸರೋವರದಲ್ಲಿ ತೆಪ್ಪೋತ್ಸವ ನಡೆಸಲಾಯಿತು. ಬಳಿಕ ಉತ್ಸವ ಮೂರ್ತಿಯನ್ನು ರಥದಲ್ಲಿರಿಸಿ ರಥಬೀದಿಯ ಸುತ್ತಲೂ ರಥೋತ್ಸವ ನೆರವೇರಿಸಲಾಯಿತು. ಇದೇ ವೇಳೆ ಅನಂತೇಶ್ವರ, ಚಂದ್ರ ಮೌಳೀಶ್ವರ ದೇವರಿಗೂ ರಥೋತ್ಸವ ನಡೆಯಿತು.
ಈ ಸಂದರ್ಭ ಸುಮಾರು ಲಕ್ಷ ಮಣ್ಣಿನ ಹಣತೆ ದೀಪಗಳನ್ನು ರಥಬೀದಿ ಸುತ್ತಲೂ ಬೆಳಗಿಸಲಾಯಿತು. ಇದಲ್ಲದೆ ಮಧ್ವಸರೋವರ, ಶ್ರೀಕೃಷ್ಣಮಠದೊಳಗೆ ದೀಪಗಳನ್ನು ಬೆಳಗಿಸಲಾಯಿತು. ಸಾವಿರಾರು ಭಕ್ತರು ಈ ಸಂಭ್ರಮದಲ್ಲಿ ಭಾಗಿಯಾದರು.
Advertisement. Scroll to continue reading.
