ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಆರೋಗ್ಯ, ಶಿಕ್ಷಣ, ಮತ್ತು ಕ್ರೀಡೆಗಳಿಗೆ ಸರಕಾರದ ಜೊತೆ ಖಾಸಗಿ ಸಂಸ್ಥೆಗಳು ಜೊತೆಯಾದಲ್ಲಿ ಸಮಾಜ ಮತ್ತು ದೇಶ ಅಭಿವೃದ್ಧಿ ಸಾದ್ಯ ಎಂದು ಡಾ. ಮೋಹನ್ ಆಳ್ವ ಹೇಳಿದರು.
ಭಾನುವಾರ ಸಂಜೆ ಬ್ರಹ್ಮಾವರ ಬಳಿಯ ಹೇರೂರಿನಲ್ಲಿರುವ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನೂತನವಾಗಿ ರಚನೆಗೊಂಡ ಶ್ರೀಮತಿ ಅರುಣಾ ಸುದರ್ಶನ್ ಹೆಗ್ಡೆ ಬಯಲು ರಂಗಮಂಟಪವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಖಾಸಗಿಯಾಗಿ ಒಂದೇ ಕಡೆಯಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡೆಯ ಸ್ಫರ್ದೆಗೇ ಬೇಕಾಗುವ ಕ್ರೀಡೆ ಹಾಗೂ ತರಬೇತಿದೊರೆಯುವ ಸಂಸ್ಥೆಯಾಗಿ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
ಸಚಿವ ವಿ. ಸುನಿಲ್ ಕುಮಾರ್, ದಿವಂಗತ ಬೈಕಾಡಿ ಸಲ್ವಾದೋರ್ ನೋರೋನ್ಹಾ ಸ್ಮಾರಕ ಮಿನಿ ಒಲಿಂಪಿಕ್ ಈಜುಕೊಳವನ್ನು ಉದ್ಘಾಟಿಸಿದರು. ಮಾಜಿ ಕ್ರೀಡಾ ಸಚಿವ ಪ್ರಮೋದ್ ಮದ್ವರಾಜ್ ಹಂದಾಡಿ ಸಿರಿಲ್ ಅಬ್ರಹಂ ಡಿ, ಸೋಜಸ್ಮಾರಕ ಪ್ರವೇಶದ್ವಾರವನ್ನು ಉದ್ಘಾಟಿಸಿದರು. ಉಡುಪಿ ಶಾಸಕ ಕೆ .ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಸ್ಪೋರ್ಟ್ಸ್ ಕ್ಲಬ್ ರೂವಾರಿ ಮತ್ತು ಹಾಲಿ ಅಧ್ಯಕ್ಷ ವೈ. ಚಂದ್ರಶೇಖರ ಹೆಗ್ಡೆ ದಂಪತಿಗಳನ್ನು ಬಂಗಾರದ ಮಾಲೆ ಹಾಕಿ ಸನ್ಮಾನಿಸಲಾಯಿತು.


ದಾನಿಗಳನ್ನು ಮತ್ತು ಸಂಸ್ಥೆಗೆ ಸಹಕರಿಸಿದವರುನ್ನು ಗೌರವಿಸಲಾಯಿತು. ಸ್ಪೋರ್ಟ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷ ಡಾ ,ಪ್ರವೀಣ್ ಕುಮಾರ್ ಶೆಟ್ಟಿ , ಸುದರ್ಶನ್ ಹೆಗ್ಡೆ, ಮಹೇಶ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ಗ್ರೇಗರಿ ಡಿ’ಸಿಲ್ವಾ , ಚಾಂತಾರು ಗ್ರಾಮ ಪಂಚಾಯತಿ ಅಧ್ಯಕ್ಷೆ ಮೀರಾ ಸದಾನಂದ ಪೂಜಾರಿ, ಡಾ. ಆನಂದ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.
