ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಸಂದರ್ಭದಲ್ಲಿ ಶ್ರೀಪಾವಂಜೆ ಮೇಳದ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಸೌಕೂರು ಮೇಳದ ಕಲಾವಿದ ಕೃಷ್ಣ ದೇವಾಡಿಗ ಉಪ್ಪುಂದ ಇವರಿಗೆ ಯಕ್ಷಧ್ರುವ ಪಟ್ಲ ಫೌಂಡೇಷನ್ (ರಿ) ಮಂಗಳೂರು ಕೇಂದ್ರೀಯ ಸಮಿತಿ ವತಿಯಿಂದ ಸಹಾಯ ಧನದ ಚೆಕ್’ನ್ನು ಸ್ಥಾಪಕಾಧ್ಯಕ್ಷ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಮತ್ತು ಬೆಳ್ತಂಗಡಿ ಘಟಕದ, ಉದಯವಾಣಿಯ ಕುಂದಾಪುರ ವಲಯದ ಪತ್ರಕರ್ತರು ಲಕ್ಷ್ಮೀ ಮಚ್ಚಿನ ಇವರು ಹಸ್ತಾಂತರಿಸಿದರು.
Advertisement. Scroll to continue reading.
ನಗರ ಠಾಣಾಧಿಕಾರಿ ಸದಾಶಿವ ಗವರೋಜಿ, ರಿಕ್ಷಾ ಚಾಲಕರ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.