ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವಕೀಲರ ಸಂಘ ಉಡುಪಿ, ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ ಕೇರಳ, ಸಮಗ್ರ ಗ್ರಾಮೀಣ ಆಶ್ರಮ ಪೆರ್ನಾಲು ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಹೆಬ್ರಿ ಬಡಾಗುಡ್ಡೆ ಕೊರಗ ಸಮುದಾಯ ಭವನದಲ್ಲಿ ಬಾಲ್ಯವಿವಾಹ ಪೋಕ್ಸೋ ಮಹಿಳೆಯರು ಹಾಗೂ ಮಕ್ಕಳ ಮೇಲಿನ ಹಿಂಸೆ ದೌರ್ಜನ್ಯಗಳ ತಡೆ ಕಾನೂನುಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಶರ್ಮಿಳಾ.ಎಸ್ ಡೋಲು ಬಾರಿಸುವ ಮೂಲಕ ನೆರವೇರಿಸಿದರು.
ಹೆಬ್ರಿ ಗ್ರಾಮ ಪಂಚಾಯಿತಿ ಪಿಡಿಒ ಸದಾಶಿವ ಸೇರ್ವೆಗಾರ್ , ಹೆಬ್ರಿ ಪೊಲೀಸ್ ಠಾಣೆಯ ಎಎಸ್ಸೈ ರಾಮ್ ಪ್ರಭು, ವಕೀಲರಾದ ಸದಾನಂದ ಸಾಲಿಯಾನ್, ವಿನಿತ್ ಕುಮಾರ್, ಕೊರಗ ಸಮಾಜದ ಪ್ರಮುಖರಾದ ಪುತ್ರನ್ ಬಡಾಗುಡ್ಡೆ, ಸತೀಶ್ ಪೆರ್ಡೂರು, ಕೊರಗ ಸಮುದಾಯದ ಮುಖಂಡರಾದ ಬೊಗ್ರ ಕೊಕ್ಕರ್ಣೆ, ಹಾಗೂ ಸಮಗ್ರ ಗ್ರಾಮೀಣ ಆಶ್ರಮದ ಕಾರ್ಯಕರ್ತ ಅಶೋಕ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸುರೇಂದ್ರ ಕಳ್ತೂರು ನಿರೂಪಿಸಿದರು. ಪ್ರಿಯಾ ಹೆಬ್ರಿ ಸ್ವಾಗತಿಸಿದರು. ವಿಮಲ ಕಳ್ತೂರು ಧನ್ಯವಾದಗೈದರು.
