ಉಡುಪಿ : ವಾಸಂತಿ ಅಂಬಲಪಾಡಿಯವರ ತುಳು ಕಥಾಸಂಕಲನ ಇರ್ನೂದೆದ ಒಂಜಿ ನೋಟು ಇಂದು ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ಬಿಡುಗಡೆಗೊಂಡಿತು. ಪುಸ್ತಕವನ್ನು ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ನಿ.ಬೀ.ವಿಜಯ ಬಲ್ಲಾಳ್ ಲೋಕಾರ್ಪಣೆಗೊಳಿಸಿದರು. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಘವೇಂದ್ರ ಕಿಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ತುಳುಕೂಟದ ಗೌರವ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಉದ್ಯಮಿ ಬಾಬು ಪೂಜಾರಿ ಸಾಸ್ತಾನ, ಜಯಂತಿ ಬಾಬು ಪೂಜಾರಿ, ಬೇಬಿ ಜತ್ತನ್, ಗಣೇಶ್ ಕಲ್ಯಾಣಪುರ, ಹಾಗೂ ಲೇಖಕಿ ವಾಸಂತಿ ಅಂಬಲಪಾಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸೀತಾರಾಮ ಪೂಜಾರಿ ಬ್ರಹ್ಮಾವರ ಪುಸ್ತಕ ಪರಿಚಯ ಮಾಡಿದರು.