Connect with us

Hi, what are you looking for?

Diksoochi News

ಕರಾವಳಿ

ಬೈಂದೂರು : ಮನೆ ನಿರ್ಮಾಣ ಮಾಡುವವರಿಗೆ ಗೃಹ ಸಾಲದಲ್ಲಿ ಗರಿಷ್ಠ ರೂ. 2.67 ಲಕ್ಷ ಸಹಾಯಧನ; ಬ್ಯಾಂಕಿಂಗ್ ಪೋರ್ಟಲ್ ಅನುಷ್ಠಾನಗೊಳಿಸಿದ ಸಂಸದ ರಾಘವೇಂದ್ರ

3

ವರದಿ : ದಿನೇಶ್ ರಾಯಪ್ಪನಮಠ

ಬೈಂದೂರು : ಕೇಂದ್ರ ಸರಕಾರದಿಂದ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಮನೆ ನರ್ಮಾಣ ಮಾಡುವವರಿಗೆ ಗೃಹ ಸಾಲದಲ್ಲಿ ಗರಿಷ್ಠ ರೂ 2.67 ಲಕ್ಷ ಸಹಾಯಧನ ನೀಡುತ್ತಿದ್ದು, ತಾಂತ್ರಿಕ ಕಾರಣದಿಂದ ಬ್ಯಾಂಕಿಂಗ್ ಪೋರ್ಟಲ್ ನಲ್ಲಿ ಅಪಡೇಟ್ ಆಗದೆ ಇದ್ದರಿಂದ ಸದರಿ ಸೌಲಭ್ಯದಿಂದ ಬೈಂದೂರು ಪಟ್ಟಣ ಪಂಚಾಯತಿ ವ್ಯಾಪ್ತಿಯ   ಸಾರ್ವಜನಿಕರು ವಂಚಿತರಾಗಿದ್ದರು. ಶಿವಮೊಗ್ಗ ಲೋಕಸಭಾ ಕ್ಷೇತ್ರ ಸಂಸದ ರಾಘವೇಂದ್ರ ಬಿ.ವೈ. ಕೇಂದ್ರ ವಸತಿ ಹಾಗೂ ನಗರ ವ್ಯವಹಾರ ಸಚಿವಾಲಯದೊಂದಿಗೆ  ವ್ಯವಹರಿಸಿ ಬ್ಯಾಂಕಿಂಗ್ ಪೋರ್ಟಲ್ ನಲ್ಲಿ ಅನುಷ್ಠಾನಗೊಳಿಸಿದ್ದಾರೆ.

ಸದರಿ ಸೌಲಭ್ಯದ ಅನುಷ್ಟಾನದಿಂದ ಬೈಂದೂರು ಪಟ್ಟಣ ಪಂಚಾಯತಿ ವ್ಯಾಪ್ತಿಯ ಯಡ್ತರೆ,ಬೈಂದೂರು,ಪಡುವರಿ ಹಾಗೂ ತಗ್ಗರ್ಸೆ ಭಾಗಗಳ ಸಾರ್ವಜನಿಕರು ಹೊಸದಾಗಿ ಮನೆ ನಿರ್ಮಾಣ ಮಾಡುವಾಗ ಗೃಹ ಸಾಲದಲ್ಲಿ ಕೇಂದ್ರ ಸರಕಾರದಿಂದ ಗರಿಷ್ಠ ರೂ 2.67 ಲಕ್ಷ ಸಹಾಯಧನವನ್ನು ಪಡೆಯಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!