Connect with us

Hi, what are you looking for?

Diksoochi News

ಕರಾವಳಿ

ಕೋಟ: ನಿಸ್ವಾರ್ಥ ಸೇವಾ ಟ್ರಸ್ಟ್ ಕೋಟ ವತಿಯಿಂದ ಬಾಲನಿಕೇತನ ಆಶ್ರಮದ ಮಕ್ಕಳಿಗೆ ಉಚಿತ ಆರೋಗ್ಯ ಶಿಬಿರ

3

ವರದಿ : ಬಿ.ಎಸ್.ಆಚಾರ್ಯ

ಕೋಟ: ನಿಸ್ವಾರ್ಥ ಸೇವಾ ಟ್ರಸ್ಟ್ ಕೋಟ ಇವರ ನೇತೃತ್ವದಲ್ಲಿ ಭಾನುವಾರ ವಿಜಯ ಬಾಲನಿಕೇತನ ಆಶ್ರಮ ಮಟಪಾಡಿ ಇಲ್ಲಿನ ಮಕ್ಕಳಿಗೆ ಉಚಿತ ವೈದ್ಯಕೀಯ ತಪಾಸಣೆ ಶಿಬಿರ ಏರ್ಪಡಿಸಲಾಯಿತು. ಈ ಕಾರ್ಯಕ್ರಮವನ್ನು ಬಾಲನಿಕೇತನ ಆಶ್ರಮದ ಟ್ರಸ್ಟಿ ಸೂರ್ಯನಾರಾಯಣ ಗಾಣಿಗ ಉದ್ಘಾಟಿಸಿದರು. ವೈದಕೀಯ ಶಿಬಿರವನ್ನು ಸಾಲಿಗ್ರಾಮದ ಪ್ರಸಿದ್ಧ ವೈದ್ಯೆ ಡಾ.ವಾಣಿಶ್ರೀ ಐತಾಳ್ ನೆರವೇರಿಸಿಕೊಟ್ಟರು.


ಆಶ್ರಮದ ಟ್ರಸ್ಟಿಗಳಾದ ಹರಿದಾಸ ಉಡುಪ, ವಿಶ್ವನಾಥ್ ಶೆಟ್ಟಿ , ಜಯರಾಮ್ ನಾಯರಿ, ನಿಸ್ವಾರ್ಥ ಸೇವಾ ಟ್ರಸ್ಟ್ ನ ಅಧ್ಯಕ್ಷ ಪ್ರದೀಪ್ ಶೆಟ್ಟಿ ,ಕಾರ್ಯದರ್ಶಿ ಪ್ರದಿಪ್ ಪೂಜಾರಿ , ಸದಸ್ಯರಾದ ಭವ್ಯ ಉಪಸ್ಥಿ ತರಿದ್ದರು. ಈ ಸಂದರ್ಭದಲ್ಲಿ ಡಾ.ವಾಣಿಶ್ರೀ ಐತಾಳ್ ಆಶ್ರಮಕ್ಕೆ ಮಕ್ಕಳಿಗೆ ಉಪಯೋಗವಾಗುವ ಪ್ರೋಟೀನ್ ಪೌಡರ್ ಮತ್ತು ತೂಕದ ಯಂತ್ರವನ್ನು ನೀಡಿದರು. ಹಾಗೂ ಆಶ್ರಮದ 46 ಮಕ್ಕಳ ಆರೋಗ್ಯ ತಪಾಸಣೆ ನಡೆಯಿತು.ಆಶ್ರಮ ಮಾತಾಜಿ ಸೌಂದರ್ಯ ನಿರ್ವಹಿಸಿ ಧನ್ಯವಾದ ಸಮರ್ಪಿಸಿದರು.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!