ವರದಿ : ಬಿ.ಎಸ್.ಆಚಾರ್ಯ
ಕೋಟ: ನಿಸ್ವಾರ್ಥ ಸೇವಾ ಟ್ರಸ್ಟ್ ಕೋಟ ಇವರ ನೇತೃತ್ವದಲ್ಲಿ ಭಾನುವಾರ ವಿಜಯ ಬಾಲನಿಕೇತನ ಆಶ್ರಮ ಮಟಪಾಡಿ ಇಲ್ಲಿನ ಮಕ್ಕಳಿಗೆ ಉಚಿತ ವೈದ್ಯಕೀಯ ತಪಾಸಣೆ ಶಿಬಿರ ಏರ್ಪಡಿಸಲಾಯಿತು. ಈ ಕಾರ್ಯಕ್ರಮವನ್ನು ಬಾಲನಿಕೇತನ ಆಶ್ರಮದ ಟ್ರಸ್ಟಿ ಸೂರ್ಯನಾರಾಯಣ ಗಾಣಿಗ ಉದ್ಘಾಟಿಸಿದರು. ವೈದಕೀಯ ಶಿಬಿರವನ್ನು ಸಾಲಿಗ್ರಾಮದ ಪ್ರಸಿದ್ಧ ವೈದ್ಯೆ ಡಾ.ವಾಣಿಶ್ರೀ ಐತಾಳ್ ನೆರವೇರಿಸಿಕೊಟ್ಟರು.
ಆಶ್ರಮದ ಟ್ರಸ್ಟಿಗಳಾದ ಹರಿದಾಸ ಉಡುಪ, ವಿಶ್ವನಾಥ್ ಶೆಟ್ಟಿ , ಜಯರಾಮ್ ನಾಯರಿ, ನಿಸ್ವಾರ್ಥ ಸೇವಾ ಟ್ರಸ್ಟ್ ನ ಅಧ್ಯಕ್ಷ ಪ್ರದೀಪ್ ಶೆಟ್ಟಿ ,ಕಾರ್ಯದರ್ಶಿ ಪ್ರದಿಪ್ ಪೂಜಾರಿ , ಸದಸ್ಯರಾದ ಭವ್ಯ ಉಪಸ್ಥಿ ತರಿದ್ದರು. ಈ ಸಂದರ್ಭದಲ್ಲಿ ಡಾ.ವಾಣಿಶ್ರೀ ಐತಾಳ್ ಆಶ್ರಮಕ್ಕೆ ಮಕ್ಕಳಿಗೆ ಉಪಯೋಗವಾಗುವ ಪ್ರೋಟೀನ್ ಪೌಡರ್ ಮತ್ತು ತೂಕದ ಯಂತ್ರವನ್ನು ನೀಡಿದರು. ಹಾಗೂ ಆಶ್ರಮದ 46 ಮಕ್ಕಳ ಆರೋಗ್ಯ ತಪಾಸಣೆ ನಡೆಯಿತು.ಆಶ್ರಮ ಮಾತಾಜಿ ಸೌಂದರ್ಯ ನಿರ್ವಹಿಸಿ ಧನ್ಯವಾದ ಸಮರ್ಪಿಸಿದರು.
Advertisement. Scroll to continue reading.
