Connect with us

Hi, what are you looking for?

Diksoochi News

ಕರಾವಳಿ

ಪರೀಕ : ಅಪರೂಪದ ಬೃಹತ್ ಶ್ರೀತಾಳೆಮರ ಪತ್ತೆ

2

ಪರೀಕ : ಅಳಿವಿನಂಚಿನಲ್ಲಿರುವ ಕೆಂಪುಪಟ್ಟಿಗೆ ಸೇರಿದ ತಾಳೆ ಮರ ಸಿಕ್ಕಿದೆ. ಪರೀಕದ ಬಳಿ ಮತ್ತೊಂದು ತಾಳೆಮರವನ್ನು ಸ್ಥಳೀಯ ಈಜುಪಟು ದಿನೇಶ್ ಪೂಜಾರಿ ಅವರ ಮಾಹಿತಿಯ ಮೇರೆಗೆ ಆತ್ರಾಡಿ ಪರೀಕ ಮಾಲಿಂಗೇಶ್ವರ ದೇವಸ್ಥಾನದಿಂದ ಮುಂದಕ್ಕೆ ಸಾಗಿ ಪರೀಕ ಕೆಳಮನೆಯಾದ ಶ್ರೀ ಸಿದ್ಧಿ ಮನೆಯ ನಿವೃತ್ತ ಶಿಕ್ಷಣ ಅಧಿಕಾರಿ ಕೆ. ಮಹಾಬಲ ಶೆಟ್ಟಿ ಅವರ ಮನೆಯ ಮುಂಭಾಗದಲ್ಲಿ , ಹಸಿರೆಲೆ ಹೊಂದಿದ ಬೃಹತ್ ಕಾಂಡ ಮತ್ತು ಗರಿಗೆದರಿ ನಿಂತ ಬೃಹತ್ ಹಸಿರುಎಲೆಗಳನ್ನು ಹೊಂದಿದ, ಶ್ರೀತಾಳೆ ಮರ ಇರುವುದು ಕಂಡುಬಂದಿದೆ.
ಶ್ರೀ ತಾಳೆಮರ ಅಳಿವಿನಂಚಿನಲ್ಲಿರುವ ಬಗ್ಗೆ ಪತ್ರಿಕೆಯಲ್ಲಿನ ಮಾಹಿತಿ ನಮಗೆ ತಿಳಿಯುವುದರಿಂದ
ನಾವು ಮುಂದಿನ ಜನಾಂಗಕ್ಕೆ ರಕ್ಷಣೆ ಮಾಡಿಕೊಂಡು ಬರುತ್ತೇವೆ ಎಂದು ಹಿರಿಯ ಶಿಕ್ಷಣ ಅಧಿಕಾರಿ ಕೆ, ಮಾಹಾಬಲ ಶೆಟ್ಟಿ, ಹಾಗೂ ಅವರ ಕುಟುಂಬಸ್ಥರು ತಿಳಿಸಿದ್ದಾರೆ.

ಈಗಾಗಲೇ ಅಪರೂಪದ ಮರ ಆಗಿರುವುದರಿಂದ ಈ ಮರದ ಎಲೆಗಳನ್ನು ಹಿರಿಯಡ್ಕದ ವೀರಭದ್ರ ದೇವಸ್ಥಾನದ ಛತ್ರಿಯ(ಕೊಡೆ) ಕೆಲಸಕ್ಕೆ ಬಳಸಿದ್ದಾರೆ. ಅದೇ ರೀತಿ ಕಲ್ಯಾಣಪುರದ ವೆಂಕಟರಮಣ ದೇವಸ್ಥಾನದವರು, ಹಾಗೂ ಸ್ಥಳೀಯ ಪರೀಕ ದೈವಸ್ಥಾನಕ್ಕೆ ಈ ಮರದ ಎಲೆಗಳನ್ನು ತೆಗೆದುಕೊಂಡು ಹೋಗಿರುತ್ತಾರೆ ಎನ್ನುತ್ತಾರೆ ಮನೆಯವರು, ಹೆಚ್ಚಿನವರು ಶ್ರೀತಾಳೆ ಮರವು ತಾಳೆ ಮರವು ಹಸಿರೆಲೆ ಇರುವುದರಿಂದ
(ತಾಳೆಬೊಂಡದ) ಗಂಡು ಪ್ರಭೇದ ಹೆಣ್ಣು ಪ್ರಭೇದ, ತುಳುನಾಡಿನಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಆದರೆ ಶ್ರೀ ತಾಳೆಮರದ ಎಲೆ ಬಹಳ ವಿಸ್ತಾರವಾಗಿ ಇರುವುದು ಕಂಡುಬಂದಿದೆ. ಹಾಗಾಗಿ ಈ ಮರದ ವಯಸ್ಸು ಸುಮಾರು 35 ಆಗಿರಬಹುದು ಮಾಲೀಕರು ತಿಳಿಸಿದ್ದಾರೆ. ಈ ತರದ ವಯಸ್ಸಿನ ಶ್ರೀ ತಾಳೆಮರವು
ಕಾಣಸಿಕ್ಕಿರುವುದು ಬಲು ಅಪರೂಪ. ಈ ಮರವು ಹೂಬಿಟ್ಟಾಗ ಮಾತ್ರ. ಶ್ರೀತಾಳೆ ಗೋಚರಿಸುವುದು ಸಾಮಾನ್ಯವಾಗಿದೆ. ಹಾಗಾಗಿ ಹೂಬಿಟ್ಟ ಚಂದ ಸಾಮಾಜಿಕ ಜಾಲತಾಣದಲ್ಲಿ ಕಂಡುಬರುತ್ತಿದೆ.
ಅಳಿವಿನಂಚಿನ ಇರುವ ಈ ಶ್ರೀತಾಳೆಮರದ ಬಗ್ಗೆ ಕಾಳಜಿ ಇರುವ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳಬೆಟ್ಟು, ಪರೀಕ ದಲ್ಲಿ ಇರುವ ಮಹಾಬಲ ಶೆಟ್ಟಿ ಅವರ ಮನೆಗೆ ಭೇಟಿ ನೀಡಿ ಶ್ರೀ ತಾಳೆಮರದ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುತ್ತಿರುವ
ಪ್ರೊ ಎಸ್.ಎ.ಕೃಷ್ಣಯ್ಯ ಅವರು ನೀಡಿದ ಕರಪತ್ರವನ್ನು ಅವರಿಗೆ ನೀಡಿದರು.

ಈ ಸಂದರ್ಭದಲ್ಲಿ ಕೆ,ಮಹಾಬಲ ಶೆಟ್ಟಿ, ಶಿವಪ್ರಸಾದ್, ಹಾಗೂ ಗಣೇಶ್ ರಾಜ್ ಸರಳೇಬೆಟ್ಟು ಜೊತೆಗಿದ್ದರು, ಎರಡು ವರ್ಷದ ಹಿಂದೆ ಆತ್ರಾಡಿ ಜಗಜೀವನ್ ದಾಸ್ ಹೆಗಡೆಯವರ ಮನೆಯ ತೋಟದಲ್ಲಿ ಹೂಬಿಟ್ಟ ಶ್ರೀ ತಾಳೆಮರ ಈಗ ಕಾಯಿಯಾಗಿ, ಕಾಯಿ ಉದುರಿ,ಈಗ ಅಂತ್ಯಕಾಲದಲ್ಲಿರುವ ಮರವನ್ನು ನೋಡಬಹುದು. ಹಾಗೂ ಸುಮಾರು ಅರ್ಧ ಕಿಲೋಮೀಟರ್ ಮುಂದೆ ಚಲಿಸಿದರೆ
ಕೆ ಮಹಾಬಲ ಶೆಟ್ಟಿ ಅವರ ಮನೆಯಲ್ಲಿ
ಹಚ್ಚ ಹಸಿರಾಗಿರುವ ಮತ್ತೊಂದು
ಶ್ರೀ ತಾಳೆಮರ ಗರಿಗೆದರಿ ನಿಂತಿರುವುದು, ಪ್ರಕೃತಿ ಪ್ರಿಯರಿಗೆ ಸಂತಸ ತಂದಿದೆ. ಈ ಹಿಂದೆ ಸಾಮಾಜಿಕ ಜಾಲ ತಾಣದಲ್ಲಿ ಹೂಬಿಟ್ಟು ಪರಿಚಯವಾದ ವೇಣೂರಿನ ಕರಿಮಣೇಲು ಪ್ರದೇಶದಲ್ಲಿ ಬೆಳೆದ ಮರ ಉಳಿಸಲು ಸರ್ವರೀತಿಯ ಪ್ರಯತ್ನ ನಡೆಸಿದರು. ಮೌಢ್ಯಕ್ಕೆ ಬಲಿಯಾಗಿರಿವುದು ಬೇಸರದ ಸಂಗತಿ ಎಂದು ಗಣೇಶ ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!