ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಹೆಬ್ರಿ ತಾಲೂಕು ಆಡಳಿತ, ಹೆಬ್ರಿ ತಾಲೂಕು ಪಂಚಾಯತ್,ಸಾರ್ವಜನಿಕ ಶಿಕ್ಷಣ ಇಲಾಖೆ, ಹೆಬ್ರಿ ಗ್ರಾಮ ಪಂಚಾಯತ್, ಉಡುಪಿ ಜಿಲ್ಲಾ ಸೇವಾದಳ ಸಮಿತಿ ಹಾಗೂ ಸೀತಾನದಿ ಸೌಖ್ಯ ಯೋಗ ಟ್ರಸ್ಟ್( ರಿ) ಇವರ ಜಂಟಿ ಸಹಭಾಗಿತ್ವದಲ್ಲಿ ಭಾರತ ರಾಷ್ಟ್ರ ಧ್ವಜ ಶಿಬಿರ ಹೆಬ್ರಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಶಿಬಿರಕ್ಕೆ ಹೆಬ್ರಿ ತಾಲೂಕು ತಹಶೀಲ್ದಾರ್ ಪುರಂದರ್ ಕೆ. ಜ್ಯೋತಿ ಪ್ರಜ್ವಲಿಸಿ ಚಾಲನೆ ನೀಡಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಬ್ರಿ ಗ್ರಾ.ಪಂ.ಅಧ್ಯಕ್ಷೆ ಮಾಲತಿಯವರು ವಹಿಸಿದ್ದರು. ಅತಿಥಿಗಳಾಗಿ ಹೆಬ್ರಿ ತಾಲೂಕು ಕಾರ್ಯನಿರ್ವಾಣಾ ಅಧಿಕಾರಿ ಶಶಿಧರ ಕೆ.ಜಿ.,ಹೆಬ್ರಿ ಪೊಲೀಸ್ ಉಪನೀರಿಕ್ಷಕ ಮಹೇಶ್ ಟಿ.ಎಂ,ಗ್ರಾ.ಪಂ.ಉಪಾಧ್ಯಕ್ಷ ಗಣೇಶ್ ಕುಮಾರ್ ಎಚ್, ಹೆಬ್ರಿ ವಲಯ ಅರಣ್ಯಧಿಕಾರಿ ಅನಿಲ್ ಕುಮಾರ್, ಶಿಕ್ಷಣ ಸಂಯೋಜಕ ವೆಂಕಟರಮಣ ಕಲ್ಕೂರ್,ಭಾರತ ಸೇವಾದಳ ಜಿಲ್ಲಾ ಸಂಘಟಕ-ಸಂಪನ್ಮೂಲ ವ್ಯಕ್ತಿ ಫಕ್ಕೀರ್ ಗೌಡ ಹಳೀಮನಿ,ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಂಜೀವ ದೇವಾಡಿಗ ತೆಳ್ಳಾರ್, ಹೆಬ್ರಿ ತಾಲೂಕಿನ ಪಂಚಾಯತ್ ಅಧ್ಯಕ್ಷರುಗಳಾದ ಚಂದ್ರಶೇಖರ್ ಶೆಟ್ಟಿ ಬೆಳ್ವೆ,ಮಂಜುನಾಥ್ ಹೆಗ್ಡೆ ಮುದ್ರಾಡಿ,ಕುಸುಮ ಪ್ರಭು ಚಾರ ಉಪಸ್ಥಿತರಿದ್ದರು.
ರಾಷ್ಟ್ರ ಧ್ವಜದ ಅರೋಹಣಾ,ಅವರೋಹಣಾ ನಿಯಮಗಳ ಬಗ್ಗೆ ಪ್ರಾತ್ಯಕ್ಷಿಕೆ, ಧ್ವಜ ಸಂಹಿತೆ ನಿಬಂಧನೆ, ಇತಿಹಾಸ ದ ಬಗ್ಗೆ ಬೌಧಿಕ್ ನಡೆಯಿತು.
ಶಿಬಿರದಲ್ಲಿ ತಾಲ್ಲೂಕಿನ ಗ್ರಾಮ ಪಂಚಾಯತ್ ಸದಸ್ಯರು, ವಿವಿಧ ಇಲಾಖಾ ಸಿಬ್ಬಂದಿಗಳು,ಶಿಕ್ಷಕರು,ಉಪನ್ಯಾಸಕ ರು,ಸಂಘಟನೆಯ ಪ್ರಮುಖರು ಶಿಬಿರಾರ್ಥಿಗಳಾಗಿ ಭಾಗವಹಿಸಿದ್ದರು.
ಪಂ.ಅಭಿವೃದ್ಧಿ ಅಧಿಕಾರಿ ಸದಾಶಿವ ಸೇರ್ವೇಗಾರ್ ಸ್ವಾಗತಿಸಿ ಸೀತಾನದಿ ವಿಠ್ಠಲ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
