ಬೆಂಗಳೂರು : ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆ ಸುದ್ದಿ ಮಾಡುತ್ತಿತ್ತು. ಈ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು 28 ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶಿಸಿದ್ದಾರೆ. ಬೆಂಗಳೂರು ನಗರದ ಉಸ್ತುವಾರಿಯನ್ನು ಸಿಎಂ ಬೊಮ್ಮಾಯಿ ಅವರೇ ಉಳಿಸಿಕೊಂಡಿದ್ದಾರೆ. ಮಾಧು ಸ್ವಾಮಿ ಹಾಗೂ ಆರ್. ಅಶೋಕ್ ಗೆ ಕೊಕ್ ನೀಡಲಾಗಿದೆ.
ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದು, ದಿನಾಂಕ 24-01-2022ರ ಟಿಪ್ಪಣಿಯಂತೆ ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡಂತ ಜಿಲ್ಲೆಗಳಿಗೆ ಕೋವಿಡ್ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿ ಆದೇಶಿಸಿರುವುದಾಗಿ ತಿಳಿಸಲಾಗಿದೆ.
- ಸಿಎಂ ಬಸವರಾಜ್ ಬೊಮ್ಮಾಯಿ – ಬೆಂಗಳೂರು ನಗರ
- ಎಸ್.ಅಂಗಾರ – ಉಡುಪಿ
- ಸುನಿಲ್ ಕುಮಾರ್ – ದಕ್ಷಿಣ ಕನ್ನಡ
- ಕೋಟ ಶ್ರೀನಿವಾಸ ಪೂಜಾರಿ – ಉತ್ತರ ಕನ್ನಡ
- ಶ್ರೀರಾಮುಲು – ಬಳ್ಳಾರಿ
- ಕೆ.ಎಸ್.ಈಶ್ವರಪ್ಪ – ಚಿಕ್ಕಮಗಳೂರು
- ಆನಂದ್ ಸಿಂಗ್ – ಕೊಪ್ಪಳ
- ಪ್ರಭು ಚೌಹ್ಹಾಣ್ – ಯಾದಗಿರಿ
- ಉಮೇಶ್ ಕತ್ತಿ – ವಿಜಯಪುರ
- ಎಂಟಿಬಿ ನಾಗರಾಜ್ – ಚಿಕ್ಕಬಳ್ಳಾಪುರ
- ಬಿ.ಸಿ.ಪಾಟೀಲ್ – ಚಿತ್ರದುರ್ಗ, ಗದಗ
- ನಾರಾಯಣ ಗೌಡ – ಶಿವಮೊಗ್ಗ
- ಮುನಿರತ್ನ – ಕೋಲಾರ
- ಆರಗ ಜ್ಞಾನೇಂದ್ರ – ತುಮಕೂರು
- ಸಿ.ಸಿ.ಪಾಟೀಲ್ – ಬಾಗಲಕೋಟೆ
- ಡಾ.ಅಶ್ವಥ್ ನಾರಾಯಣ್ – ರಾಮನಗರ
- ಮುರುಗೇಶ್ ನಿರಾಣಿ – ಕಲ್ಬುರ್ಗಿ
- ಬಿ.ಎ.ಬಸವರಾಜ್ – ದಾವಣಗೆರೆ
- ಡಾ.ಕೆ.ಸುಧಾಕರ್ – ಬೆಂಗಳೂರು ಗ್ರಾ.
- ಕೆ.ಗೋಪಾಲಯ್ಯ – ಹಾಸನ, ಮಂಡ್ಯ
- ಶಶಿಕಲಾ ಜೊಲ್ಲೆ – ವಿಜಯನಗರ
- ಶಂಕರ್ ಬಿ.ಪಾಟೀಲ್ ಮುನೇನಕೊಪ್ಪ – ರಾಯಚೂರು, ಬೀದರ್
- ಬಿ.ಸಿ.ನಾಗೇಶ್ – ಕೊಡಗು
- ಹಾಲಪ್ಪ ಆಚಾರ್ – ಧಾರವಾಡ
- ಎಸ್.ಟಿ.ಸೋಮಶೇಖರ್ – ಮೈಸೂರು
- ಶಿವರಾಂ ಹೆಬ್ಬಾರ್ – ಹಾವೇರಿ
- ವಿ.ಸೊಮಣ್ಣ – ಚಾಮರಾಜನಗರ
- ಗೋವಿಂದ ಎಂ.ಕಾರಜೋಳ – ಬೆಳಗಾವಿ
Advertisement. Scroll to continue reading.

In this article:diksoochi Tv, diksoochi udupi, Diksoochinews, district incharge minister

Click to comment