ಶಿವಮೊಗ್ಗ : ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದಲ್ಲಿ ಸಿಂಹಿಣಿ ಮೃತಪಟ್ಟಿದೆ.
11 ವರ್ಷದ ‘ಮಾನ್ಯ’ ಎಂಬ ಹೆಸರಿನ ಹೆಣ್ಣು ಸಿಂಹಿಣಿ ಜ.31 ರಂದು ಮೃತಪಟ್ಟಿದೆ. ಒಂದು ವಾರದ ಹಿಂದೆ ಯಶವಂತ್ ಎಂಬ ಸಿಂಹದ ಜೊತೆ ಕಾದಾಟ ನಡೆಸಿ ಮಾನ್ಯ ಗಂಭೀರವಾಗಿ ಗಾಯಗೊಂಡಿತ್ತು.
ಸಿಂಹಧಾಮದ ವೈದ್ಯರು ಮಾನ್ಯಗೆ ನಿರಂತರ ಚಿಕಿತ್ಸೆ ನೀಡಿ ಆರೈಕೆ ಮಾಡುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ.
Advertisement. Scroll to continue reading.
ಕಾನೂನು ರೀತಿಯಲಿ ಮರಣೋತ್ತರ ಪರೀಕ್ಷೆ ನಡೆಸಿ, ಸಿಂಹಿಣಿಯ ದೇಹವನ್ನು ವಿಲೇ ಮಾಡಲಾಗಿದೆ.