ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ: ಜಿಲ್ಲಾ, ರಾಜ್ಯ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಾಂತಿನಿಕೇತನ ಯುವ ವೃಂದ ಹಾಗೂ ಓಂಕಾರ ಮಹಿಳಾ ಮಂಡಳಿ ಕುಚ್ಚೂರು ಇವರ ಜಂಟಿ ಆಶ್ರಯದಲ್ಲಿ ನಮ್ಮ ಚಿತ್ತ ನಮ್ಮ ಗ್ರಾಮದ ಸ್ವಚ್ಚತೆಯತ್ತ ವಿಶೇಷ ಸ್ವಚ್ಚತಾ ಕಾರ್ಯಕ್ರಮದಡಿ ಯಲ್ಲಿ ಶಾಸ್ತ್ರಿನಗರ ಕಿರಿಯ ಪ್ರಾಥಮಿಕ ಶಾಲೆಯಿಂದ ಕುಚ್ಚೂರು ಗ್ರಾಮ ಪಂಚಾಯತ್ ತನಕ ಸ್ವಚ್ಚತೆ ಮಾಡಲಾಯಿತು.
ಈ ಸ್ವಚ್ಚತಾ ಕಾರ್ಯಕ್ರಮ ನೇತ್ರತ್ವ ವಹಿಸಿದ ಶಾಂತಿನಿಕೇತನ ಯುವ ವೃಂದ ಮತ್ತು ಓಂಕಾರ ಮಹಿಳಾ ಮಂಡಳಿಗೆ ಗ್ರಾಮ ಪಂಚಾಯತ್ ಸದಸ್ಯ ಬಾದ್ಲು ಮಹೇಶ್ ಶೆಟ್ಟಿ ಅಭಿನಂದನೆಯನ್ನು ಸಲ್ಲಿಸಿ ಮಾತನಾಡಿ, ಶಾಂತಿನಿಕೇತನ ವಿಭಿನ್ನ ಚಿಂತನೆಗಳೊಂದಿಗೆ ಸಮಾಜಖಿ ಕೆಲಸದಲ್ಲಿ ನಿರಂತರವಾಗಿ ತೊಡಗಿದೆ. ಶಾಂತಿನಿಕೇತನದ ನಮ್ಮ ಚಿತ್ತ ನಮ್ಮ ಗ್ರಾಮದ ಸ್ವಚತೆಯತ್ತ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತ್ ನಿಂದ ಸಂಪೂರ್ಣ ಸಹಕಾರ ನೀಡಲಾಗುತ್ತದೆ ಎಂದರು.

ಸ್ವಚ್ಚತಾ ಕೆಲಸದಲ್ಲಿ ಶಾಂತಿನಿಕೇತನದ ಅಧ್ಯಕ್ಷ ರಾಜೇಶ್, ಓಂಕಾರ ಮಹಿಳಾ ಮಂಡಳಿಯ ಅಧ್ಯಕ್ಷೆ ಜಯಶ್ರೀ, ಸದಸ್ಯರಾದ ಜಯಕರ್, ಮಹೇಶ್, ಕೆ ಗಣೇಶ್, ನರೇಂದ್ರ ನಾಗರಾಜ್ ಪ್ರಸನ್ನ, ರಾಜೇಶ್ರಿ, ಚಂದ್ರಾವತಿ, ಪೂರ್ಣಿಮಾ, ನಳಿನಿ, ವಿನೋದಾ, ಮಿನಾಕ್ಷೀ ಮತ್ತಿತರರು ಉಪಸ್ಥಿತರಿದ್ದರು.