Connect with us

Hi, what are you looking for?

Diksoochi News

ರಾಜ್ಯ

ಹಿಜಾಬ್ ವಿವಾದ : ನಾಳೆಗೆ ಅರ್ಜಿ ವಿಚಾರಣೆ ಮುಂದೂಡಿಕೆ

0

ಬೆಂಗಳೂರು : ಉಡುಪಿ ಜಿಲ್ಲೆಯಲ್ಲಿ ಆರಂಭಗೊಂಡ ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದ ರಾಜ್ಯದ ಹಲವೆಡೆ ಹಬ್ಬಿತ್ತು. ಉಡುಪಿಯ ವಿದ್ಯಾರ್ಥಿಗಳು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಕೃಷ್ಣ ದೀಕ್ಷಿತ್ ಏಕ ಸದಸ್ಯ ಪೀಠ ವಾದ – ವಿವಾದಗಳನ್ನು ಆಲಿಸಿ ನಾಳೆಗೆ ವಿಚಾರಣೆ ಮುಂದೂಡಲಾಗಿದೆ. ನಾಳೆ ಮಧ್ಯಾಹ್ನ 2.30ಕ್ಕೆ ವಿಚಾರಣೆ ನಡೆಯಲಿದೆ.

ಅರ್ಜಿದಾರರ ಪರವಾಗಿ ದೇವದತ್‌ ಹಿರಿಯ ವಕೀಲ ದೇವದತ್ ಕಾಮತ್ ವಾದ ಮಂಡನೆ ಮಾಡಿದರೆ, ಸರ್ಕಾರದ ಪರವಾಗಿ ಎಜಿ ಪ್ರಭುಲಿಂಗ ನಾವದಗಿ ವಾದ ಮಾಡಿದರು.

ಅರ್ಜಿದಾರರ ಪರವಾಗಿ ದೇವದತ್ತ ಕಾಮತ್ ವಾದ ಮಂಡಿಸಿ, ಹಲವಾರು ವಿಚಾರಗಳನ್ನು ಅವರು ಮಂಡಿಸಿದರು. ಹಿಜಾಬ್ ಮೂಲಭೂತ ಹಕ್ಕು, ಅವಕಾಶ ನೀಡಬೇಕು ಎಂದು ವಾದ ಮಂಡಿಸಿದರು. ಈ ಸಂದರ್ಭ ಕೇರಳ, ಬಾಂಬೆ ಹೈಕೋರ್ಟ್ ಆದೇಶದ ಕುರಿತು ಈ ವೇಳೆ ಅವರು ಉಲ್ಲೇಖಿಸಿದರು.

Advertisement. Scroll to continue reading.

ನ್ಯಾ.ಕೃಷ್ಣದೀಕ್ಷಿತ್ ನಾಳೆ ಸಂಕ್ಷಿಪ್ತ ವಾದ ಮಂಡಿಸಲು ತಿಳಿಸಿದ್ದು, ಶಾಂತಿ ಕಾಪಾಡುವಂತೆ ವಿದ್ಯಾರ್ಥಿ ಸಂಘುಟನೆಗಳಿಗೆ ತಿಳಿಸಿದ್ದಾರೆ. ನಾಳೆಗೆ ಅರ್ಜಿ ವಿಚಾರಣೆ ಮುಂದೂಡಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!