ಹಿರಿಯಡ್ಕ : ಹಿರಿಯಡ್ಕ ವ್ಯಾಪ್ತಿಯ ಅಂಜಾರಿನಲ್ಲಿ ಎರಡು ಅವಳಿ ಶ್ರೀ ತಾಳೆಮರವು ಇರುವುದನ್ನು ಆತ್ರಾಡಿಯ ಮುಳುಗು ತಜ್ಞ, ಈಜುಪಟು ದಿನೇಶ್ ಪೂಜಾರಿ ಆತ್ರಾಡಿಯವರ ಮಾಹಿತಿ ಮೇರೆಗೆ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟುರವರ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಮರ ಇರುವುದನ್ನು ಖಚಿತಪಡಿಸಿದ್ದಾರೆ.
ಈ ಮರ ಇರುವ ಪ್ರದೇಶ ಅಂಜಾರಿನ ದಟ್ಟಅರಣ್ಯದ ಪೊದೆಯಲ್ಲಿ ಹಚ್ಚಹಸಿರಾಗಿರುವ ಈ ಶ್ರೀತಾಳೇಮರ ಗರಿಗೆದರಿದಟ್ಟ ಕಾನನದಲ್ಲಿ ಗಮನ ಸೆಳೆಯುತ್ತಿದೆ.
ವಿಶ್ವದಲ್ಲಿಯೇ ಶ್ರೀತಾಳೆಮರ ಅವನತಿ ಅಂಚಿನಲ್ಲಿದ್ದು ಕೆಂಪುಪಟ್ಟಿಗೆ ಸೇರಿರುವುದು ಬೇಸರದ ಸಂಗತಿಯಾಗಿದೆ. ಇಂತಹ ಶ್ರೀತಾಳೆಮರವನ್ನು ಎರಡು ವರ್ಷದ ಹಿಂದೆ ಆತ್ರಾಡಿ ಬಳಿ, ಹೂಬಿಟ್ಟ ಸಂದರ್ಭದಲ್ಲಿ ಗೋಚರವಾಗಿದ್ದು , ಹೆಚ್ಚಿನವರು ತಾಳಿಬೊಂಡ ಮರ ಎಂದು ತಿಳಿದುಕೊಂಡಿದ್ದಾರೆ. ಆದರೆ, ಈ ಶ್ರೀತಾಳೆ ಮರವು ವಿಭಿನ್ನವಾಗಿರುತ್ತದೆ.
ಇದರ ಬೃಹತ್ ಗಾತ್ರದ ಹಚ್ಚಹಸಿರು ಇರುವ ಎಲೆಗಳ ಮೂಲಕ ಈ ಮರದ ಕುರುಹು ಪತ್ತೆಹಚ್ಚಬಹುದು. ಈಮರ ದೊಡ್ಡದಾಗಿ ಬೆಳೆಯುವ ಹಂತದಲ್ಲಿ ಗುರುತು ಮಾಡಬಹುದು. ಈ ಹಿಂದೆ ಆತ್ರಾಡಿ ಬಳಿ ಜಗಜೀವನ ದಾಸ್ ಹೆಗ್ಡೆಯವರ ಮನೆಯಂಗಳದಲ್ಲಿ, ಹಾಗೂ ಪರೀಕದ ಶಿಕ್ಷಣಾಧಿಕಾರಿಯವರಮನೆಯ ಬಳಿ, ಶ್ರೀ ತಾಳೆ ಮರ ಇರುವುದು ಕಂಡುಬಂದಿದೆ. ಇದೀಗ ಹಿರಿಯಡ್ಕದ ಅಂಜಾರಿನಲ್ಲಿಯೇ ಅವಳಿ ಶ್ರೀತಾಳೆಮರ ಜೊತೆಯಾಗಿ ಇರುವುದು ಕಂಡುಬಂದ ಹಿನ್ನೆಲೆಯಲ್ಲಿ ಪ್ರಕೃತಿ ಮತ್ತು ವೃಕ್ಷ ಪ್ರಿಯರಿಗೆ ಸಂತಸ ತಂದಿದೆ.
ಇದು ನಮ್ಮ ತಂಡದ ಸದಸ್ಯರಿಗೆಯೇ ಕಾನನದ ಅಂಚಿನಲ್ಲಿ ಪತ್ತೆ ಆಗಿರುವುದು ತಂಡದ ಸದಸ್ಯರೆಲ್ಲರಲ್ಲೂ ಸಂತಸ ತಂದಿದೆ. ಇಂತಹ ಮರಗಳನ್ನು ರಕ್ಷಿಸುವಲ್ಲಿ ಈ ಹಿಂದೆ ಶ್ರೀಗಂಧ ಮರಕ್ಕೆ ಹೇಗೆ ಸರ್ಕಾರ ರಕ್ಷಣೆ ಮಾಡುವಂತಹ. ಸರಕಾರ ಮಟ್ಟದಲ್ಲಿ ಭದ್ರತೆ ಒದಗಿಸಿತ್ತು. ಅಂತೆಯೇ, ಮುಂದಿನ ಪೀಳಿಗೆಗೆ ಇಂತಹ ಮರಗಳ ಸದುಪಯೋಗದ ಬಗ್ಗೆ ಸರಕಾರ ಮಟ್ಟದಲ್ಲಿ ರಕ್ಷಣೆಯ ಕುರಿತು, ಮತ್ತು ಬೆಳೆಸುವಂತಹ ಕಾರ್ಯ ಸರಕಾರ ಮಟ್ಟದಲ್ಲಿವಾಗಬೇಕು. ಎಂದು ಒತ್ತಾಯಿಸಿದ್ದಾರೆ. ಈ ಮರವು ಅರುವತ್ತು ಎಪ್ಪತ್ತು ವರ್ಷ ಬೆಳೆದುಹೂ ಬಿಟ್ಟು ಕಾಯಿಯಾಗಿ ಸಾಯುತ್ತದೆ, ಹೂ ಬಿಡುವ ಸಂದರ್ಭದಲ್ಲಿ ಮೌಢ್ಯಕ್ಕೆ ಬಲಿಯಾಗುವುದನ್ನು ಪ್ರಜ್ಞಾವಂತರ ತುಳುನಾಡಿನಲ್ಲಿಯೂ ಕೂಡ ಅಲ್ಲಿ ಇಲ್ಲಿ ಕಂಡುಬರುತ್ತದೆ. ಇದನ್ನು ತಪ್ಪಿಸಬೇಕು. ಈ ನಿಟ್ಟಿನಿಂದ ಸರ್ಕಾರ ಮಟ್ಟದಲ್ಲಿ ಈ ಮರದ ರಕ್ಷಣಾಕಾರ್ಯಗಳಾಗಬೇಕು ಎಂದು ಗಣೇಶ್ ರಾಜ್ ಸರಳೇಬೆಟ್ಟು ಅಭಿಪ್ರಾಯಪಟ್ಟಿದ್ದಾರೆ.

ಈ ಶ್ರೀತಾಳೆಮರವು ಅಂಜಾರಿನ ಮನೋಜ್ ಶೆಟ್ಟಿಯವರ ಸೇರಿದ ಜಾಗದಲ್ಲಿದೆ ಎಂದು ತಿಳಿದುಬಂದಿದೆ.

