Connect with us

Hi, what are you looking for?

Diksoochi News

ಸಿನಿಮಾ

ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬ: ಫಸ್ಟ್ ಲುಕ್ ಟೀಸರ್ ನಲ್ಲಿ ದರ್ಶನ್ ಅಕ್ಷರ ‘ಕ್ರಾಂತಿ’; ಹೊಸ ಚಿತ್ರದ ಥೀಮ್ ಪೋಸ್ಟರ್ ರಿಲೀಸ್

1

ಚಂದನವನ : ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹುಟ್ಟು ಹಬ್ಬದ ಸಂಭ್ರಮ. ಅಪ್ಪು ಅಕಾಲಿಕ ಮರಣದ ಹಿನ್ನೆಲೆಯಲ್ಲಿ ಹುಟ್ಟು ಹಬ್ಬದ ಆಚರಣೆ ಬೇಡ ಎಂದು ಈಗಾಗಲೇ ದಚ್ಚು ತಮ್ಮ ಅಭಿಮಾನಿಗಳಲ್ಲಿ ಹೇಳಿಕೊಂಡಿದ್ದರು. ಆದರೆ, ಅಭಿಮಾನಿಗಳಿಗಾಗಿ ವಿಶೇಷ ಉಡುಗೊರೆ ನೀಡಿದ್ದಾರೆ.

ಹೌದು, ಇಂದು ದರ್ಶನ್ ಅಭಿನಯದ ‘ಕ್ರಾಂತಿ’ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಗೊಂಡಿದೆ. ಸಮಾಜಕ್ಕೆ ಸಂದೇಶದೊಂದಿಗೆ, ಮಾಸ್ ಲುಕ್ ಟೀಸರ್ ನಲ್ಲಿದ್ದು, ಎಲ್ಲರ ಚಿತ್ತ ಸೆಳೆದಿದೆ.

ಸಕತ್ ಡೈಲಾಗ್:

Advertisement. Scroll to continue reading.

ಟೀಸರ್ ನಲ್ಲಿ ಒಂದು ಅದ್ಭುತ ಡೈಲಾಗ್ ಇದೆ. ‘ನನ್ನ ಶಾಲೆ. ಅಕ್ಷರ ಎದೆಗೆ ಬಿತ್ತಿದ ಶಾಲೆ. ಪ್ರಜ್ಞೆಯ ತಲೆಗೆ ನೂಕಿದ ಶಾಲೆ. ಬದುಕುವ ದಾರಿ ತೋರಿದ ಶಾಲೆ. ಎಲ್ಲರನ್ನೂ ಪ್ರೀತಿಸುವುದ ಕಲಿಸಿದ ಶಾಲೆ. ತಾಯಿ ನುಡಿ ದೇವ ನುಡಿ ಎಂದ ಶಾಲೆ‌. ಆ ತಾಯಿಗೆ ನನ್ನ ಕನ್ನಡ ತಾಯಿಗೆ, ನಾನು ಚಿರಋಣಿ ಎಂದು ದರ್ಶನ್ ಡೈಲಾಗ್ ಹೊಡೆದಿದ್ದು, ಇದು ಇಷ್ಟವಾಗುತ್ತದೆ.

ಟೀಸರ್ ನ ಕೊನೆಯಲ್ಲಿ ಮಾಸ್ ಲುಕ್ ನಲ್ಲಿ ದಚ್ಚು ಕಾಣಿಸಿಕೊಂಡಿದ್ದು, ಮಾಸ್ ಎಲಿಮೆಂಟ್ಸ್ ಚಿತ್ರದಲ್ಲಿರಲಿದೆ ಅಲ್ಲೋದು ಖಾತರಿಯಾಗುತ್ತೆ.

ಪ್ಯಾನ್ ಇಂಡಿಯಾ ಸಿನಿಮಾ ‘ಕ್ರಾಂತಿ’:

ವಿ.ಹರಿಕೃಷ್ಣ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕ್ರಾಂತಿ ಪ್ಯಾನ್ ಇಂಡಿಯಾ ಸಿನಿಮಾ. ಈ ಚಿತ್ರದ ಮೂಲಕ ಮತ್ತೆ ರಚಿತಾ ರಾಮ್ ಮತ್ತು ದರ್ಶನ್ ಜೋಡಿ ಒಂದಾಗುತ್ತಿದೆ. ಬಿ. ಸುರೇಶ್ ಮತ್ತು ಶೈಲಜಾ ನಾಗ್ ಬಂಡವಾಳ ಹೂಡಿದ್ದಾರೆ.

Advertisement. Scroll to continue reading.

ತರುಣ್ ಸುಧೀರ್ ಜೊತೆ ಸಿನಿಮಾ:

ತರುಣ್ ಸುಧೀರ್ ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ 56 ನೇ ಚಿತ್ರ ಮಾಡುತ್ತಿದ್ದಾರೆ. ಇಂದು ಥೀಮ್ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ಸತ್ಯ ಘಟನೆ ಆಧಾರಿತ ಎನ್ನಲಾಗಿದೆ. ಹಿಂದಿರೋವ್ರಿಗೆ ದಾರಿ, ಮುಂದಿರೋವ್ನದ್ದು ಜವಾಬ್ದಾರಿ ಎಂದು ಉಲ್ಲೇಖಿತವಾಗಿದೆ. ರಾಕ್ಲೈನ್ ವೆಂಕಟೇಶ್ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!