Connect with us

Hi, what are you looking for?

Diksoochi News

ಕರಾವಳಿ

ಮೂಡಬಿದಿರೆ: ಶ್ರೀತಾಳೆಮರ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಗಣೇಶ್ ರಾಜ್ ಸರಳೇಬೆಟ್ಟುರಿಗೆ ಸನ್ಮಾನ

0

ಮೂಡುಬಿದಿರೆ: ಒಪ್ಪಿಕೋ ಪಚ್ಚೆ ವನಸಿರಿ ಅಭಿಯಾನ, ಹಸುರು ಪರಿಸರ ಪರಸ್ಪರ_ಕಾಳಜಿ ನಮ್ಮದು ಈ ಮೂಲಕ ಮರಗಿಡಗಳ ರಕ್ಷಣೆಯ ದೊತ್ಯವಾಗಿ ಇತ್ತೀಚೆಗೆ ಉಡುಪಿಯ ಆತ್ರಾಡಿ ಯಲ್ಲಿ ಶ್ರೀ ತಾಳೆ ಮರ ಹೂಬಿಟ್ಟ ಸಂದರ್ಭದಲ್ಲಿ, ಮತ್ತು ನಂತರ ಸಾಮಾಜಿಕ ಜಾಲತಾಣದಲ್ಲಿ ಪ್ರಚುರಪಡಿಸಿ, ಅಲ್ಲಿಯ ಮನೆಯ ಮಾಲೀಕರ ಜೊತೆ, ಈ ಮರ ಮೌಡ್ಯಕ್ಕೆ ಬಲಿಯಾಗದೆ, ಮನೆಯವರ ಮನವೊಲಿಸಿ, ಶ್ರೀತಾಳೆ ಮರ ರಕ್ಷಣೆಯ ಪ್ರಮುಖ ಪಾತ್ರವಹಿಸಿದ್ದಕ್ಕೆ, ಮೂಡಬಿದ್ರೆ ಯಲ್ಲಿ,ನಡೆದ ಕಾರ್ಯಕ್ರಮದಲ್ಲಿ ಜಗದ್ಗುರು ಸ್ವಸ್ತಿ ಶ್ರೀ ಡಾ| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು, ಮೂಡಬಿದರೆಯ ಜೈನಮಠದ ಭಟ್ಟಾರಕ ಸಭಾಭವನದಲ್ಲಿ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ಅವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಉಡುಪಿಯ ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಎಸ್.ಎ. ಕೃಷ್ಣಯ್ಯ, ಇತಿಹಾಸ ಸಂಶೋಧಕರಾದ ಶ್ರೀಧರ್ ಭಟ್ ಕಲ್ಯಾಣಪುರ, ಶುತ್ರೇಶ್ ಆಚಾರ್ಯ ಮೂಡುಬೆಳ್ಳೆ, ರವಿ ಅಳ್ವ ಮೊದಲಾದವರು ಜೊತೆಗಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!