ವರದಿ : ಶ್ರೀದತ್ತ ಹೆಬ್ರಿ
ಕಾರ್ಕಳ : ಕಾರ್ಕಳ ಉತ್ಸವದ ಅಂಗವಾಗಿ ಪೂರ್ವತಯಾರಿಯ ಸಮಾಲೋಚನಾ ಸಭೆಯು ಹೆಬ್ರಿಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಹೆಬ್ರಿ ತಹಸೀಲ್ದಾರ್ ಪುರಂದರ ಕೆ., ಕಾರ್ಕಳ ಉತ್ಸವದ ಯಶಸ್ಸಿಗೆ ಎಲ್ಲ ಹೆಬ್ರಿ ಭಾಗದ ಜನರು ಸಹಕಾರ ನೀಡಿ ಎಂದು ಕರೆಕೊಟ್ಟರು.
Advertisement. Scroll to continue reading.

ಈ ಸಂದರ್ಭದಲ್ಲಿ ಇಒ ಶಶಿಧರ್, ಹೆಬ್ರಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ್ ಕುಮಾರ್, ವಿವಿಧ ಪಂಚಾಯಿತಿಗಳ ಅಧ್ಯಕ್ಷರಾದ ದಿನೇಶ್ ಹೆಗ್ಡೆ, ಶೇಖರ ಶೆಟ್ಟಿ, ಉಷಾ ಹೆಬ್ಬಾರ್, ಪ್ರಮುಖರಾದ ಮಹಾವೀರ ಹೆಗ್ಡೆ, ನವೀನ್ ನಾಯಕ್, ಜ್ಯೋತಿ ಹರೀಶ್, ರಮೇಶ್ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯರು, ವಿವಿಧ ಸಂಘ ಸಂಸ್ಥೆಯ ಪ್ರಮುಖರು, ಮುಖಂಡರು ಹಾಗೂ ಸಾರ್ವಜನಿಕರು ನೆರೆದಿದ್ದರು.
In this article:Diksoochi news, diksoochi Tv, diksoochi udpi, k.purandar, Karkala Utsava

Click to comment