ರಾಯಚೂರು: ಶಾಲೆಗೆ ತೆರಳುತ್ತಿದ್ದಂತ ವಿದ್ಯಾರ್ಥಿನಿಯೊಬ್ಬಳನ್ನು ನಡು ರಸ್ತೆಯಲ್ಲೇ ಸೋದರ ಸಂಬಂಧಿ ಚಾಕುವಿನಿಂದ ಇರಿದು ಹತ್ಯೆಗೈದಿರೋ ಘಟನೆ ಮಸ್ಕಿ ಪಟ್ಟಣದ ಹೊರವಲಯದ ಸಾನಬಾಳ ಕ್ರಾಸ್ ಬಳಿ ನಡೆಸಿದೆ.
ಭೂಮಿಕಾ (15) ಕೊಲೆಗೀಡಾದ ಬಾಲಕಿ. ರಮೇಶ್(28) ಆರೋಪಿ.
ಮದುವೆಯಾಗುವುದಕ್ಕೆ ನಿರಾಕರಿಸಿದ ಹಿನ್ನೆಲೆ ಸೋದರತ್ತೆಯ ಪುತ್ರಿ ಭೂಮಿಕಾಗೆ ಚಾಕು ಇರಿದು ರಮೇಶ್ ಹತ್ಯೆಗೈದಿದ್ದಾನೆ. ನಿರ್ಜನ ಪ್ರದೇಶಕ್ಕೆ ಭೂಮಿಕಾಳನ್ನು ಕರೆದೊಯ್ದು ಕಿರುಕುಳ ನೀಡಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

ಸೋದರ ಅತ್ತೆ ಮಗಳಾಗಿದ್ದ ಭೂಮಿಕಾಳನ್ನು ಆರೋಪಿ ರಮೇಶ್ ಕಳೆದೊಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ. ಈ ಮಧ್ಯೆ ರಮೇಶ್ ಜೊತೆ ಭೂಮಿಕಾಳ ಮದುವೆಗೆ ನಿರಾಕರಣೆ ಕೇಳಿಬಂದಿದೆ. ಸಗೋತ್ರದ ನೆಪ ಹೇಳಿ ಭೂಮಿಕಾ ಕುಟುಂಬಸ್ಥರು ಮದುವೆಗೆ ನಿರಾಕರಿಸಿದ್ದರು. ನಿನ್ನೆ ಬೆಂಗಳೂರಿನಿಂದ ಮಸ್ಕಿಗೆ ಬಂದಿದ್ದ ರಮೇಶ ಶಾಲೆಗೆ ಹೋಗಿದ್ದ ಭೂಮಿಕಾಳನ್ನು ಕರೆದು ತರಲು ಹೋಗಿದ್ದ.
ಆಗ ಭೂಮಿಕಾಳನ್ನು ಗಿಡಗಂಟೆಗಳಿರುವ ಪ್ರದೇಶಕ್ಕೆ ಕರೆದೊಯ್ದು ಟಾರ್ಚರ್ ಮಾಡಿ, ಮದುವೆಯಾಗುವಂತೆ ಪೀಡಿಸಿದ್ದಾನೆ. ಬಳಿಕ ಚಾಕುವಿನಿಂದ ಇರಿದಿದ್ದಾನೆ. ನಿರ್ಜನ ಪ್ರದೇಶದಿಂದ ಮುಖ್ಯ ರಸ್ತೆಗೆ ಓಡಿ ಬಂದು ಭೂಮಿಕಾ ಒದ್ದಾಡಿ ಪ್ರಾಣಬಿಟ್ಟಿದ್ದಳು. ಈ ಸಂಬಂಧ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
