Connect with us

Hi, what are you looking for?

Diksoochi News

ಕರಾವಳಿ

ಬೈಂದೂರು : ಸಾಮೂಹಿಕ ಸತ್ಯನಾರಾಯಣ ಪೂಜಾ ಮತ್ತು ವಾರ್ಷಿಕ ಮಹಾಸಭೆ

0

ಬೈಂದೂರು : ಸೋಮ ಕ್ಷತ್ರೀಯ ಗಾಣಿಗ ಸೇವಾ ಸಂಘ ತಗ್ಗರ್ಸೆ ಗ್ರಾಮ ಇವರ ಆಶ್ರಯದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜಾ ಮತ್ತು ವಾರ್ಷಿಕ ಮಹಾಸಭೆ ಕಾರ್ಯಕ್ರಮವು ಸೋಮಲಿಂಗೇಶ್ವರ ದೇವಾಸ್ಥಾನ ಚಂದಣದಲ್ಲಿ ನಡೆಯಿತು.

ವೇದಮೂರ್ತಿ ಸುಬ್ರಹ್ಮಣ್ಯ ಹೆಗಡೆಯವರ ‌ನೇತ್ರತ್ವದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ವಿಶೇಷವಾಗಿ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನ ತಗ್ಗರ್ಸೆ ಗ್ರಾಮದ ಗಾಣಿಗ ಸಂಘಟನೆಯ ಅಧ್ಯಕ್ಷರಾದ ರಾಜು ಗಾಣಿಗ ಹುಳುವಾಡಿ ವಹಿಸಿದ್ದರು.

ಸಭೆ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಉದ್ಘಾಟಿಸಿದ ನಾಗರಾಜ್ ಗಾಣಿಗ ಬಂಕೇಶ್ವರ, ಸಂಘಟನೆಯೆನ್ನುವುದು ಸಮಾಜದ ಉತ್ತಮ ಕಾರ್ಯಗಳಿಗೆ ಮಾರ್ಗದರ್ಶಿಯಾಗಬೇಕು. ಸಮಾಜಮುಖಿ ಕೆಲಸವನ್ನು ಮಾಡುವುದರ ಮೂಲಕ ಇಡೀ ನಾಗರೀಕರು ನಮ್ಮ ಸಂಘಟನೆಯನ್ನು ಗುರುತಿಸುವ ಕಾರ್ಯವನ್ನು ಮಾಡಬೇಕು ಎಂದು ಹೇಳಿದರು.

ಈ ಸಮಯದಲ್ಲಿ ಸಾಧಕರನ್ನು ಗೌರವಿಸಿ ಸನ್ಮಾನಿಸಲಾಯಿತು.

Advertisement. Scroll to continue reading.

ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿಗಳಾದ ವೀರಭದ್ರ ಗಾಣಿಗ,ಯಕ್ಷಗಾನ ಕಲಾವಿದರುಗಳಾದ ಹೇರಾಂಜಾಲು ಗೋಪಾಲ ಗಾಣಿಗ, ಶ್ರೀಧರ ಗಾಣಿಗ ಉಪ್ಪುಂದ, ನಾರಾಯಣ ಗಾಣಿಗ ಹೊಸಮನೆ, ನಾರಾಯಣ ಗಾಣಿಗ ಹಾಲಂಬೇರು, ಬೈಂದೂರು ಜೆ.ಸಿ.ಐ ಅಧ್ಯಕ್ಷರಾದ ಸವಿತಾ ದಿನೇಶ್ ಗಾಣಿಗ, ಗೋವಿಂದ ಗಾಣಿಗ ಹೆಗ್ಗೇರಿ, ಮಂಜುನಾಥ ಗಾಣಿಗ ಹುಳುವಾಡಿ, ಶಿಕ್ಷಕರಾದ ಶೇಖರ ಗಾಣಿಗ ಬೀಜಮಕ್ಕಿ, ರಂಗ ಗಾಣಿಗ ಉಪಸ್ಥಿತರಿದ್ದರು. ಸಂಘದ ಮುಂದಿನ ಅವಧಿಯ ಅಧ್ಯಕ್ಷರಾಗಿ ವೀರಭದ್ರ ಗಾಣಿಗ, ಕಾರ್ಯದರ್ಶಿಯಾಗಿ ರವೀಂದ್ರ ಟಿ. ತಗ್ಗರ್ಸೆ, ಜೊತೆ ಕಾರ್ಯದರ್ಶಿಯಾಗಿ ಮಹೇಶ್ ಗಾಣಿಗ ತಗ್ಗರ್ಸೆ ಆಯ್ಕೆಯಾದರು.

ವೇದಿಕೆಯಲ್ಲಿ ಉತ್ತಮವಾಗಿ ತಮ್ಮ ಮಾತಿನಿಂದ ಸಭೆಯನ್ನು ಸೆಳೆದುಕೊಂಡು ಕಾರ್ಯಕ್ರಮ ನಿರೂಪಿಸಿದ ಮಂಜುನಾಥ ಗಾಣಿಗ ಆಲಂದೂರು ಇವರಿಗೆ ಸಂಘದ ವತಿಯಿಂದ ಗೌರವಿಸಲಾಯಿತು. ವಂದಾನಾರ್ಪಣೆಯನ್ನು ರವೀಂದ್ರ ಟಿ. ಗಾಣಿಗ ನೆರೆವೆರೆಸಿದರು.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!