Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ : ಮಹತೋಭಾರ ಶ್ರೀಸಿದ್ಧಿ ವಿನಾಯಕ ದೇವಸ್ಥಾನ ತೆಂಕಬೆಟ್ಟು ಉಪ್ಪೂರು ಜಾತ್ರಾ ಮಹೋತ್ಸವ; ಹಸಿರು ಹೊರೆಕಾಣಿಕೆ

2

ವರದಿ : ಬಿ.ಎಸ್‌.ಆಚಾರ್ಯ

ಬ್ರಹ್ಮಾವರ : ಮಹತೋಭಾರ ಶ್ರೀಸಿದ್ಧಿ ವಿನಾಯಕ ದೇವಸ್ಥಾನ ತೆಂಕಬೆಟ್ಟು ಉಪ್ಪೂರು ಇಲ್ಲಿನ ಜಾತ್ರಾ ಮಹಾ ರಥೋತ್ಸವಕ್ಕೆ ಮಂಗಳವಾರ ಚಿತ್ತಾರಿ ಶ್ರೀ ಮಹಾಭಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆಯೊಂದಿಗೆ ಹಸಿರು ಹೊರೆಕಾಣಿಕೆ ಜರುಗಿತು.


ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಸಚಿವ ಪ್ರಮೋದ್ ಮದ್ವರಾಜ್ ರನ್ನು ದೇವಸ್ಥಾನದ ವತಿಯಿಂದ ಕರುಣಾಕರ ಯು. ಗೌರವಿಸಿದರು.

Advertisement. Scroll to continue reading.

ಉಪ್ಪೂರು ಬಸ್ ನಿಲ್ದಾಣದ ಬಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಘವೇಂದ್ರ ಭಟ್ ಮೆರವಣಿಗೆಗೆ ಚಾಲನೆ ನೀಡಿದರು.

ಈ ಸಂದರ್ಭ ತೆಂಕಬೆಟ್ಟು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಭಾಕರ ಶೆಟ್ಟಿ, ಪಿಳ್ಕಳ ಗರಡಿಯ ಮುಖ್ಯಸ್ಥ ರಾಜು ಪೂಜಾರಿ, ಹಾವಂಜೆ ದೇವಸ್ಥಾನದ ಸುರೇಶ್ ಶೆಟ್ಟಿ ಮತ್ತು ಸಿದ್ಧಿ ವಿನಾಯಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರು ಪರಿಸರದ ಅನೇಕ ಸಂಘ ಸಂಸ್ಥೆಯ ಮುಖ್ಯಸ್ಥರು ಹಾಜರಿದ್ದರು.

ಉಪ್ಪೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಾಗಿಬಂದ ಹಲವಾರು ವಾಹನಗಳ ಮೆರವಣಿಗೆಯಲ್ಲಿ ಹೊರೆಕಾಣಿಕೆ ಮತ್ತು ದೇವಸ್ಥಾನಕ್ಕೆ ಸಮರ್ಪಣೆಯಾಗಲಿರುವ ಮಂಟಪ, ಪೂರ್ಣ ಕುಂಭದ ಮಹಿಳೆಯರು, ಚಂಡೆ ಬಳಗ, ನಾನಾ ಟ್ಯಾಬ್ಲೋಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿತ್ತು .

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!