ವರದಿ : ಬಿ.ಎಸ್.ಆಚಾರ್ಯ
ಕಾರ್ಕಳ : ಕಾರ್ಕಳ ಉತ್ಸವಕ್ಕೆ ಇಂದು ಸ್ವಚ್ಛತಾ ಕಾರ್ಯಕ್ರಮಕ್ಕೆ ನೀರೆ ಗ್ರಾಮ ಪಂಚಾಯತ್ ಶುಚಿ ಗೊಳಿಸಿ ಶಿವತಿಕೆರೆ ಕಾರ್ಕಳ ಸುತ್ತ ಮುತ್ತ ವರ್ಲಿ ಆರ್ಟ್ಸ್ ಮೂಲಕ ಕಂಗೊಳಿಸುತ್ತಿದೆ.

ಉಡುಪಿ ಕಾರ್ಕಳ ಹೈವೇ ಮೂಲಕ ಹಾದು ಹೋಗುವಾಗ ನೀರೇ ಗ್ರಾಮ ಪಂಚಾಯತ್ ಮೊದಲಿಗೆ ಕಾರ್ಕಳ ಉತ್ಸವದ ಸ್ವಾಗತಕ್ಕೆ ಸಜ್ಜಾಗಿದೆ. ಸ್ವತಃ ಇಂಧನ ಮತ್ತು ಕನ್ನಡ ಹಾಗು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಸ್ವತಃ ತಾವೇ ನಗರ ಸುಂದರಗೊಳಿಸಲು ವರ್ಲಿ ಆರ್ಟ್ ಕಲಾಕೃತಿಗೆ ಚಾಲನೆ ನೀಡಿದರು.

ಕಾರ್ಕಳ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ವಿಕ್ರಂ ಹೆಗ್ಡೆ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಮಾಲಿನಿ, ನೀರೆ ಪಂಚಾಯತ್ ಪಿಡಿಓ ಅಂಕಿತಾ ನಾಯಕ್, ಪಂಚಾಯತ್ ಅಧ್ಯಕ್ಷೆ ಶಾಲಿನಿ ನೇತೃತ್ವದಲ್ಲಿ ಕಾರ್ಕಳ ಶಿವತಿಕೆರೆ, ಬಂಡೀಮಠ ಹಾಗು ಸುತ್ತಮುತ್ತ ಶುಚಿಗೊಳಿಸಿ, ಬಣ್ಣ ಬಣ್ಣದ ಚಿತ್ತಾರಗಳನ್ನು ಬಿಡಿಸಲಾಗಿದೆ.

ಪಂಚಾಯತ್ ಅಧ್ಯಕ್ಷರು ಸದಸ್ಯರು ಹಾಗು ಸಿಬ್ಬಂದಿಗಳು ಮತ್ತು ಸಾರ್ವಜನಿಕರಿಂದ ಇಂದು ಶ್ರಮದಾನ ನಡೆಸಿದ್ದು, ಕಾರ್ಕಳ ಉತ್ಸವಕ್ಕೆ ಸಜ್ಜಾಗಿದೆ.

