ಹೆಬ್ರಿ : ಶಾಲೆಗೆ ಹೊರಟಿದ್ದ ವಿದ್ಯಾರ್ಥಿ ಸೈಕಲ್ ಸ್ಕಿಡ್ ಆಗಿ ಮೃತಪಟ್ಟಿರುವ ಘಟನೆ ಹರಿಖಂಡಿಗೆ ಕಂಚಿಗುಂಡಿ ರಸ್ತೆಯಲ್ಲಿ ನಡೆದಿದೆ.
ಬೈರಂಪಳ್ಳಿ ಗ್ರಾಮದ ಸತೀಶ್ ಕುಲಾಲ್ ಎಂಬವರ ಪುತ್ರ ಶ್ರೇಯಸ್ (13) ಮೃತ ವಿದ್ಯಾರ್ಥಿ. ತನ್ನ ಸೈಕಲ್ನಲ್ಲಿ ಮಾರ್ಚ್ 16 ರಂದು ಬೆಳಿಗ್ಗೆ ಶಾಲೆಗೆ ಹೋಗುವುದಕ್ಕಾಗಿ ಮನೆಯಿಂದ ಸೈಕಲ್ನಲ್ಲಿ ಹೋಗುತ್ತಿರುವಾಗ ಸೈಕಲ್ ಸ್ಕಿಡ್ ಆಗಿ ರಸ್ತೆಗೆ ಕವುಚಿ ಬಿದ್ದಿದ್ದಾರೆ. ಸತೀಶ್ ಕುಲಾಲ್ ರವರು ಓಡಿ ಹೋಗಿ ಕೂಡಲೆ ಮೇಲಕ್ಕೆತ್ತಿ ನೋಡಿದಾಗ ಹಣೆಗೆ ರಕ್ತಗಾಯವಾಗಿದ್ದು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆಯೇ ಶ್ರೇಯಸ್ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.