ಉಡುಪಿ : ಮಂಗಳೂರು ವಿಶ್ವವಿದ್ಯಾನಿಲಯ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಉಡುಪಿ, ಸಂಸ್ಕೃತಿ ಸಿರಿ ಟ್ರಸ್ಟ್ ಹಿರಿಯಡ್ಕ ಇದರ ಸಹಯೋಗದಲ್ಲಿ “ತುಳು ಸಂಸ್ಕೃತಿ ಸಿರಿ ಕೂಟ” ಎಂಬ ಕಾರ್ಯಕ್ರಮವನ್ನು ಮಾ.26 ರಂದು ಸಂಜೆ 4 ಗಂಟೆಗೆ ಉಡುಪಿಯ ಗೋವಿಂದ ಪೈ ಕೇಂದ್ರದ ಧ್ವನ್ಯಾಲೋಕ ಭವನದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ತುಳುಪೀಠದ ಕಪ್ಪಂದಕರ್ಯ ಕುಪ್ಪಣ್ಣ-ತುಂಬೆಕ್ಕ ಪ್ರತಿಷ್ಠಾನ, ಮೂಡುಬೆಳ್ಳೆ ವತಿಯಿಂದ ದತ್ತಿ ಉಪನ್ಯಾಸ ನಡೆಯಲಿದೆ.
” ಯಾನ್ ದಾಯೆಗ್ ತುಳುಟ್ಟು ಬರೆಯೇ..? ಎಂಬ ವಿಚಾರದ ಕುರಿತು ಮಂಗಳೂರಿನ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷೆ ಎಂ. ಜಾನಕಿ ಬ್ರಹ್ಮಾವರ ಅವರು ದತ್ತಿ ಉಪನ್ಯಾಸ ನೀಡಲಿದ್ದಾರೆ.
ತುಳು ಪಾಡ್ದನ ಸಮೀಕ್ಷೆ ಪ್ರಬಂಧ ಸ್ಪರ್ಧೆಯ ವಿಜೇತ ಅಪ್ಪಿ ಪಾಣಾರ ಮೂಡುಬೆಳ್ಳೆ ಅವರಿಗೆ ಮುದ್ದು ಮೂಡುಬೆಳ್ಳೆ ಅವರು ಸಂಸ್ಕೃತಿ ಸಿರಿ ಬಹುಮಾನ ವಿತರಣೆ ಮಾಡಿ ಗೌರವಿಸಲಿದ್ದಾರೆ.

ಈ ವೇಳೆ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಉಡುಪಿ ಇದರ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ, ಪ್ರತಿಷ್ಠಾನದ ಸಂಚಾಲಕರಾದ ಸುಜಾತ ಎಸ್ ಸುವರ್ಣ ಮೂಡು ಬೆಳ್ಳೆ ಉಪಸ್ಥಿತರಿರಲಿದ್ದಾರೆ.
