ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ರಾಘವೇಂದ್ರ ಮಠದ ಬಳಿ ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ಆಡುತ್ತಿದ್ದ 5 ಜನರನ್ನು ಹೆಬ್ರಿಯ ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ.
ಹಣವನ್ನು ಪಣವಾಗಿಟ್ಟುಕೊಂಡು ಜುಗಾರಿ ಆಡುತ್ತೀರುವುದಾಗಿ ಬಂದ ಮಾಹಿತಿಯ ಮೇರೆಗೆ ಹೆಬ್ರಿ ಪಿಎಸ್ಐ ಸುದರ್ಶನ್ ದೊಡಮನಿ ಪೊಲೀಸ್ ತಂಡ ದಾಳಿ ನಡೆಸಿ ಆಟದಲ್ಲಿ ನಿರತರಾಗಿದ್ದ ಹೊಸೂರಿನ ಹರೀಶ್ ಪೂಜಾರಿ, ಚಾರ ಹಸಿ ಕೊಡ್ಲಿನ ಆಶ್ರಿತ್, ಕುಚ್ಚೂರು ಬಾಗಲ್ ಜಡ್ಡಿನ ಮಂಜುನಾಥ ಶೆಟ್ಟಿ, ಬಚ್ಚಪ್ಪು ನಿವಾಸಿ ದಿನೇಶ್ ಪೂಜರಿ ಹಾಗೂ ಹೆಬ್ರಿ ದೇವಸ್ಥಾನ ಬೆಟ್ಟು ನಿವಾಸಿ ಸುಧಾಕರ ದೇವಾಡಿಗ ಅವರನ್ನು ವಶಕ್ಕೆ ಪಡೆಯಲಾಗಿದೆ.
Advertisement. Scroll to continue reading.