ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ರಾಜ್ಯದಾದ್ಯಂತ ಇಂದು ನಡೆಯುತ್ತಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಬ್ರಹ್ಮಾವರ ವಲಯದಲ್ಲಿ 5 ವಿಭಾಗದಲ್ಲಿ 58 ಪ್ರೌಢ ಶಾಲೆಯ 13 ಪರೀಕ್ಷಾ ಕೇಂದ್ರದಲ್ಲಿ 2750 ವಿದ್ಯಾರ್ಥಿಗಳು ಇದ್ದಾರೆ.
ಬೆಳಿಗ್ಗೆ 5 ವಾಹನದಲ್ಲಿ 5 ಮಾರ್ಗಾಧಿಕಾರಿಗಳು ಪೊಲೀಸ್ ಬಂದೋಬಸ್ತ್ ನಲ್ಲಿ ಪರೀಕ್ಷಾ ಕೇಂದ್ರಕ್ಕೆ ಪ್ರಶ್ನೆ ಪತ್ರಿಕೆ ಕೊಂಡು ಹೋಗಲಾಗಿತ್ತು.


ಪರೀಕ್ಷಾ ಕೇಂದ್ರಗಳಾದ ಮಣಿಪಾಲ್ ಜ್ಯೂನಿಯರ್ ಕಾಲೇಜು , ಪೆರ್ಡೂರು ಪ್ರೌಢ ಶಾಲೆ , ಸರಕಾರಿ ಪದವೀ ಪೂರ್ವ ಕಾಲೇಜು ಕೆಮ್ಮಣ್ಣು , ಮಿಲಾಗ್ರೀಸ್ ಪ್ರೌಢ ಶಾಲೆ ಕಲ್ಯಾಣಪುರ , ಸರಕಾರಿ ಪದವೀ ಪೂರ್ವ ಕಾಲೇಜು ಬ್ರಹ್ಮಾವರ , ಎಸ್ ಎಂ ಎಸ್ ಪದವೀ ಪೂರ್ವ ಕಾಲೇಜು ಬ್ರಹ್ಮಾವರ , ನಿರ್ಮಲ ಅನುದಾನಿತ ಶಾಲೆ ಬ್ರಹ್ಮಾವರ , ವಿವೇಕ ಪದವಿ ಪೂರ್ವ ಕಾಲೇಜು ಕೋಟ, ವಿವೇಕ ಬಾಲಕೀಯರ ಪ್ರೌಢ ಶಾಲೆ ಕೋಟ , ನ್ಯಾಷನಲ್ ಪದವೀ ಪೂರ್ವ ಕಾಲೇಜು ಬಾರಕೂರು , ಸರಕಾರಿ ಪ್ರೌಢ ಶಾಲೆ ಆವರ್ಸೆ , ಶ್ರೀ ದುರ್ಗಾ ಪರಮೇಶ್ವರೀ ಅನುದಾನಿತ ಪ್ರೌಢ ಶಾಲೆ ಮಂದಾರ್ತಿ , ಕರ್ನಾಟಕ ಪಬ್ಲಿಕ್ ಸ್ಕೂಲ್ ಕೊಕ್ಕರ್ಣೆಯಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ.
ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಪಾಲಿಸ ಬೇಕಾದ ನಿಯಮಗಳನ್ನು ಅಳವಡಿಸಲಾಗಿತ್ತು.
ಪ್ರತೀ ಶಾಲೆಯಲ್ಲಿ ಓರ್ವ ಪೋಲೀಸ್ ಮತ್ತು ಮೊಬೆಲ್ ಸ್ವಾದೀನಾಧಿಕಾರಿ ಇನ್ನಿತರ ಸಿಬ್ಬಂದಿಗಳ ಇದ್ದಾರೆ. ಯಾವೂದೇ ಅಹಿತಕರ ಘಟನೆ ಕಂಡು ಬಂದಿಲ್ಲ
1426 ಹುಡುಗರು, 1324 ಹುಡುಗಿಯರು ಪರೀಕ್ಷೆ ಬರೆದಿದ್ದು, ಒಟ್ಟು 32 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.
ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಬಿ .ಟಿ ನಾಯ್ಕ್ ಎಸ್ ಎಸ್ ಎಲ್ ಸಿ ನೋಡಲ್ ಅಧಿಕಾರಿ ರಾಘವ ಶೆಟ್ಟಿ , ಪರೀಕ್ಷಾ ಮಂಡಳಿಯ ಸದಸ್ಯ ಕಿರಣ್ ಹೆಗ್ಡೆ ಭೇಟಿ ನೀಡಿ ಪರೀಶೀಲನೆ ಮಾಡಿದ್ದಾರೆ.
ಬ್ರಹ್ಮಾವರ ವಲಯದಲ್ಲಿ 2750 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅಧಿಕಾರಿಗಳ ಸೂಚನೆ ಮೇರೆಗೆ ಸಕಲ ಸಿದ್ಧತೆಗಳೊಂದಿಗೆ ಪರೀಕ್ಷೆ ನಡೆಸಲಾಗಿದೆ. 32 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ.
ರಾಘವ ಶೆಟ್ಟಿ, ನೋಡಲ್ ಅಧಿಕಾರಿ
