Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ : ಕಲೆ ಮತ್ತು ಕ್ರೀಡೆ ಅಳವಡಿಸಿಕೊಂಡಲ್ಲಿ ಸಹನೆ ಮತ್ತು ತಾಳ್ಮೆಗೆ ಸಹಾಯಕ : ಬೈಕಾಡಿ ಸುಪ್ರಸಾದ್ ಶೆಟ್ಟಿ

1

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಕಲೆ ಮತ್ತು ಕ್ರೀಡೆಯನ್ನು ಅಳವಡಿಸಿಕೊಂಡಲ್ಲಿ ಸಹನೆ ಮತ್ತು ತಾಳ್ಮೆಗೆ ಸಹಾಯವಾಗುತ್ತದೆ ಎಂದು ದಕ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಹೇಳಿದರು.
ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ಮಂಗಳವಾರ ಜರುಗಿದ ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ಸ್ ಅಸೋಶಿಯೇಶನ್ ಟ್ಯಾಕ್ಸಿ ಹಾಗೂ ಮ್ಯಾಕ್ಸಿ ಕ್ಯಾಬ್ ಚಾಲಕರ ಮತ್ತು ಮಾಲಕರ ಸಂಘ ಬ್ರಹ್ಮಾವರ ವಲಯ ಘಟಕದಿಂದ ಜಿಲ್ಲಾ ಮಟ್ಟದ ಕ್ರಿಕೇಟ್ ಪಂದ್ಯಾಟದ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಇತ್ತೀಚಿನ ದಿನದಲ್ಲಿ ಬಹುತೇಕ ನಡು ವಯಸ್ಸಿನವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಜೀವನವೇ ಬೇಡ ಎನ್ನುವ ಹಂತದಿಂದ ಆತ್ಮ ಹತ್ಯೆಯಂತ ಹೀನಕೆಲಸ ಮಾಡಿಕೊಳ್ಳುತ್ತಿದ್ದಾರೆ ಕಲೆ ಕ್ರೀಡೆಗಳು ಸಹನೆಯನ್ನು ಕಲಿಸುತ್ತದೆ ಎಂದರು.
ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ.ಎನ್ .ಶಂಕರ ಪೂಜಾರಿ ಪಂದ್ಯಾಟವನ್ನು ಉದ್ಘಾಟಿಸಿದರು.

ಜಿಲ್ಲೆಯ ನಾನಾ ಭಾಗದಿಂದ 10 ತಂಡಗಳು ಭಾಗವಹಿದ್ದು ಅಂತಿಮ ಹಣಾಹಣಿಯಲ್ಲಿ ಟ್ಯಾಕ್ಸಿ ಮ್ಯಾಕ್ಸಿ ಬ್ರಹ್ಮಾವರ ತಂಡ ಪ್ರಥಮ ಹಾಗೂ ಎಂ ಜಿ ದುರ್ಗಾ ದ್ವೀತೀಯ ಬಹುಮಾನ ಹಾಗೂ ಟ್ರೋಫಿ ತನ್ನದಾಗಿಸಿಕೊಂಡಿತು.


ಡಾ ಸಂದೀಪ್ ಪೈ , ಚೇತನ್ ಕುಮಾರ್ ಶೆಟ್ಟಿ , ಮಹೇಂದ್ರ ಕುಮಾರ್ , ಸಂಘದ ಅಧ್ಯಕ್ಷ ರಮೇಶ್ ನಾಯಕ್ , ಪಧಾಧಿಕಾರಿಗಳಾದ ಸಂತೋಷ ಪೂಜಾರಿ ,ಕರುಣಾಕರ ಪೂಜಾರಿ , ಜಯಕರ ಕುಂದರ್ ಉಪಸ್ಥಿತರಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!