ಬೆಂಗಳೂರು: ಈಗಾಗಲೇ ಬಾಲಕಿಯೊಬ್ಬಳನ್ನು ಬಲಿ ಪಡೆದಿದ್ದಂತ ಬಿಬಿಎಂಪಿ ಕಸದ ಲಾರಿಗೆ, ಈಗ ಮತ್ತೊಂದು ಬಲಿಯಾಗಿದೆ. 60 ವರ್ಷದ ವೃದ್ಧರೊಬ್ಬರು ಕಸದ ಲಾರಿಗೆ ಸಿಕ್ಕು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರಿನ ಬೇಗೂರು ಕ್ರಾಸ್ ಬಳಿಯ ರೇವಾ ವಿವಿಯ ಬಳಿಯಲ್ಲಿ ಕಸದ ಲಾರಿ ಡಿಕ್ಕಿ ಹೊಡೆದು ವೃದ್ಧರೋರ್ವರು ಮೃತಪಟ್ಟಿದ್ದಾರೆ. ಸಂಪಿಗೆಹಳ್ಳಿ ನಿವಾಸಿ ರಾಮಯ್ಯ (60) ಮೃತ ದುರ್ದೈವಿ. ರಾಮಯ್ಯ ದೇಹ ಮೇಲೆಯೇ ಕಸದ ಲಾರಿ ಹರಿದ ಪರಿಣಾಮ, ಅವರ ದೇಹ ಛಿದ್ರವಾಗಿದೆ. ಯಲಹಂಕ ಆಸ್ಪತ್ರೆಗೆ ಮೃತದೇಹ ರವಾನಿಸಲಾಗಿದೆ.
ಇತ್ತೀಚಿಗೆ ಬಾಲಕಿಯೊಬ್ಬಳು ಬಿಬಿಎಂಪಿಯ ಕಸದ ಲಾರಿಯ ಹರಿದು ಬಾಲಕಿ ಅಕ್ಷಯಾ ಮೃತಪಟ್ಟಿದ್ದಳು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ದುರ್ಘಟನೆ ನಡೆದಿದೆ.
Advertisement. Scroll to continue reading.