ಬ್ರಹ್ಮಾವರ : ಫ್ರಾನ್ಸ್ ನಲ್ಲಿ ನಡೆಯಲಿರುವ ಅಂತರ್ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಉಡುಪಿ-ಅಜ್ಜರಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಮಾಧುರ್ಯ ಶೆಟ್ಟಿ ಅವರಿಗೆ ಬೆಂಗಳೂರು ಬಂಟರ ಸಂಘದ ವತಿಯಿಂದ 50,000/- ರೂಪಾಯಿಗಳನ್ನು ನೀಡಿ ಶುಭ ಹಾರೈಸಿದರು.
ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ , ಖಜಾಂಜಿ ದೀಪಕ್ ಶೆಟ್ಟಿ ಬಾರಕೂರು , ಕ್ರೀಡಾ ಸಮಿತಿಯ ರಾಧಾಕೃಷ್ಣ ಶೆಟ್ಟಿ,
ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ , ಮಾಧುರ್ಯ ಶೆಟ್ಟಿಯ ಪೋಷಕರು ದೈಹಿಕ ಶಿಕ್ಷಕ ಸಂಘದ ಪಧಾಧಿಕಾರಿಗಳು, ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕರುಗಳು ಉಪಸ್ಥಿತರಿದ್ದರು.


ಈಕೆ ಕ್ರೀಡೆಯಲ್ಲಿ ಹಲವಾರು ಕಡೆಯಲ್ಲಿ ಭಾಗವಹಿಸಿ ಸಾಧನೆ ಮಾಡಿದವಳಾಗಿದ್ದು ಗ್ರಾಮೀಣ ಭಾಗವಾದ ಹಿಲಿಯಾಣದ ತಂದೆ ಕೃಷ್ಣ ಮೂರ್ತಿ ಶೆಟ್ಟಿ ಗಾರೆ ಕೆಲಸ ಮಾಡಿಕೊಂಡು 3 ಹೆಣ್ಣು ಮಕ್ಕಳ ವಿದ್ಯಾಬ್ಯಾಸಕ್ಕೆ ದಂಪತಿಗಳ ಕೂಲಿ ಕೆಲಸವೆ ಜೀವನಾಧಾರವಾಗಿದ್ದು ಮಾಧುರ್ಯ ಅವರೀಗೆ ಆರ್ಥಿಕ ನೆರವು ನೀಡುವವರು ಅವರ ಕೆನರಾ ಬ್ಯಾಂಕ್ ಬೆಳ್ವೆ ಶಾಖೆ ಖಾತೆ ಸಂಖ್ಯೆ 0647108056741 ಐ ಎಫ್ ಎಸ್ ಸಿ ಸಂಖ್ಯೆ ಸಿ ಎನ್ ಆರ್ ಬಿ0000647 ಇಲ್ಲಿಗೆ ಹಣ ಸಂದಾಯ ಮಾಡಬಹುದು.