ಮುಂಬೈ: ಬಾಲಿವುಡ್ ನಟ,ಬರಹಗಾರ ಶಿವ ಕುಮಾರ್ ಸುಬ್ರಮಣ್ಯಂ ವಿಧಿವಶರಾಗಿದ್ದಾರೆ.
1989 ರಲ್ಲಿ ಪರಿಂದಾ ಚಿತ್ರದ ಮೂಲಕ ಬರಹಗಾರರಾಗಿ ಪದಾರ್ಪಣೆ ಮಾಡಿದ ಅವರು ಅನೇಕ ಚಿತ್ರಗಳಿಗೆ ಚಿತ್ರಕಥೆ ಬರೆದಿದ್ದಾರೆ. ನಟರಾಗಿ ಗುರುತಿಸಿಕೊಂಡಿದ್ದಾರೆ.
ಟು ಸ್ಟೇಟ್ಸ್, ಹಿಚ್ಕಿ, ನೇಲ್ ಪಾಲೀಶ್, ರಾಕಿ ಹ್ಯಾಂಡ್ಸಮ್ ಮೊದಲಾದ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಮೀನಾಕ್ಷಿ ಸುಂದರೇಶ್ವರ್ ಅವರ ನಟನೆಯ ಕೊನೆಯ ಚಿತ್ರವಾಗಿದೆ.
Advertisement. Scroll to continue reading.
ಅವರ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ಪತ್ರಕರ್ತೆ ಬೀನಾ ಸರ್ವಾರ್ ಮತ್ತು ನಿರ್ದೇಶಕ ಹನ್ಸಾಲ್ ಮೆಹ್ತಾ ಅವರ ಸಾವಿಗೆ ಬಾಲಿವುಡ್ ಅವರು ಮಾಡಿದ ಟ್ವೀಟ್ ಅನ್ನು ರೀಟ್ವೀಟ್ ಮಾಡುವ ಮೂಲಕ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.