Connect with us

Hi, what are you looking for?

Diksoochi News

ಸಿನಿಮಾ

ಶೂಟಿಂಗ್ ವೇಳೆ ಅವಘಡ; ನಟ ಧನ್ವೀರ್ ಗೌಡ ಕೈಗೆ ಪೆಟ್ಟು

2

ಬೆಂಗಳೂರು: ಸಿನಿಮಾ ಚಿತ್ರೀಕರಣ ವೇಳೆ ಅವಘಡಗಳು ನಡೆಯುತ್ತಲಿರುವೆ. ಕಲಾವಿದರುಗಳು ಗಾಯಗೊಳ್ಳುತ್ತಿರುತ್ತಾರೆ. ಅಲ್ಲದೇ, ಕೆಲವು ಸಾವುಗಳು ನಡೆದು ಚಿತ್ರರಂಗದಲ್ಲಿ ಮಾಸಿಲ್ಲ. ಇದೀಗ ವಾಮನ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಅವಘಡ ಉಂಟಾಗಿ ನಟ ಧನ್ವೀರ್ ಗೌಡ ಅವರ ಕೈಗೆ ಪೆಟ್ಟು ಬಿದ್ದಿದೆ ಎಂದು ತಿಳಿದು ಬಂದಿದೆ.

ಶಂಕರ್ ರಾಮನ್ ಸಾರಥ್ಯದ ವಾಮನ ಚಿತ್ರದ ಶೂಟಿಂಗ್ ವೇಳೆ ಅವಘಡ ಸಂಭವಿಸಿದೆ. ಬೆಂಗಳೂರಿನ ಯಲಹಂಕದಲ್ಲಿ ಚಿತ್ರೀಕರಣದ ಸಂದರ್ಭದಲ್ಲಿ, ರೋಪ್ ನಿಂದ ಕೆಳಗೆ ಬಿದ್ದು ನಟ ಧನ್ವೀರ್ ಗೌಡ ಅವರ ಕೈಗೆ ಪೆಟ್ಟಾಗಿರೋದಾಗಿ ತಿಳಿದು ಬಂದಿದೆ.

ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ. ಚಿಕಿತ್ಸೆ ಪಡೆದ ನಂತ್ರ, ಚಿತ್ರೀಕರಣಕ್ಕೆ ಯಾವುದೇ ತೊಂದರೆ ಆಗಬಾರದು ಎನ್ನೋ ಕಾರಣದಿಂದ ಧನ್ವೀರ್, ವಾಮನ ಚಿತ್ರೀಕರಣವನ್ನು ಮುಂದುವರೆಸಿದ್ದಾರೆ ಎಂದು ಹೇಳಲಾಗಿದೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!